ಹೊಸದಿಗಂತ ವರದಿ,ಕುಶಾಲನಗರ:
ಹೆಜ್ಜೇನು ದಾಳಿಗೊಳಗಾಗಿ ರೈತರೊಬ್ಬರು ಸಾವಿಗೀಡಾದ ಘಟನೆ ಶಿರಂಗಾಲ ಗ್ರಾಮ ಪಂಚಾಯತಿ ವ್ಯಾಪ್ತಿಯ ನಲ್ಲೂರು ಗ್ರಾಮದಲ್ಲಿ ನಡೆದಿದೆ.
ಗ್ರಾಮದ ರೈತ ನಂಜುಂಡ (50)ಎಂಬವರೇ ಸಾವಿಗೀಡಾದವರು.
ಪ್ರತಿನಿತ್ಯದಂತೆ ನಂಜುಂಡ ಅವರು ತಮ್ಮ ಜಮೀನಿಗೆ ತೆರಳಿದ ಸಂದರ್ಭ, ಜಮೀನಿನ ಮರದಲ್ಲಿದ್ದ ಹೆಜ್ಜೇನು ಹುಳುಗಳ ಗುಂಪು ಅವರ ಮೇಲೆ ದಾಳಿ ಮಾಡಿವೆ.
ನಂಜುಂಡ ಅವರು ಕಿರುಚುತ್ತಾ ಸಮೀಪದ ಮನೆಯ ಹತ್ತಿರ ಬಂದಿದ್ದು, ಮನೆಯವರು ಸಮೀಪದ ಕೊಣನೂರು ಸರಕಾರಿ ಆಸ್ಪತ್ರೆಗೆ ಚಿಕಿತ್ಸೆಗೆ ಕರೆದೊಯ್ದಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ನಂಜುಂಡ ಪರಿಣಾಮವಾಗಿ ನಂಜುಂಡ (50) ಸಾವನ್ನಪ್ಪಿದ್ದಾರೆ. ಮೃತರು ಪತ್ನಿ ಮತ್ತು ಇಬ್ಬರು ಮಕ್ಕಳನ್ನು ಅಗಲಿದ್ದಾರೆ.