ರೀಫಂಡ್‌ ಬಗ್ಗೆ ಚಿಂತೆ ಇಲ್ಲ! ರಾಜ್ಯದ 5000 ಮಂದಿಯಿಂದ ಜಮ್ಮು ಟ್ರಿಪ್‌ ಕ್ಯಾನ್ಸಲ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ಪಹಲ್ಗಾಮ್ ಭಯೋತ್ಪಾದಕ ದಾಳಿಯಿಂದ ಭಯಬೀತಗೊಂಡಿರುವ, ಕರ್ನಾಟಕದ ಅನೇಕ ಪ್ರವಾಸಿಗರು ಜಮ್ಮು ಮತ್ತು ಕಾಶ್ಮೀರಕ್ಕೆ ತಮ್ಮ ಪ್ರಯಾಣ ಬುಕಿಂಗ್‌ಗಳನ್ನು ರದ್ದುಗೊಳಿಸಿದ್ದಾರೆ. ರೀಫಂಡ್‌ ಬಗ್ಗೆ ಗಮನಹರಿಸದೇ ತಮ್ಮ ಟ್ರಿಪ್‌ ಕ್ಯಾನ್ಸಲ್‌ ಮಾಡಿದ್ದು, ಸದ್ಯ ಜಮ್ಮು ಕಾಶ್ಮೀರದ ಕಡೆ ಜನ ತಲೆಹಾಕೋದಿಲ್ಲ ಎನ್ನಲಾಗಿದೆ.

ಕರ್ನಾಟಕ ಪ್ರವಾಸೋದ್ಯಮ ಸಂಘ ಸಂಗ್ರಹಿಸಿದ ಪ್ರಾಥಮಿಕ ಮಾಹಿತಿಯ ಪ್ರಕಾರ, ಪ್ರವಾಸ ನಿರ್ವಾಹಕರ ಮೂಲಕ ಜಮ್ಮು ಮತ್ತು ಕಾಶ್ಮೀರಕ್ಕೆ ಹೋಗಲು ಯೋಜಿಸಿದ್ದ 5,000 ಕ್ಕೂ ಹೆಚ್ಚು ಪ್ರವಾಸಿಗರು ತಮ್ಮ ಬುಕಿಂಗ್‌ಗಳನ್ನು ರದ್ದುಗೊಳಿಸಿದ್ದಾರೆ ಜೊತೆಗೆ ಹಣವನ್ನು ಕಳೆದುಕೊಳ್ಳುವ ಬಗ್ಗೆ ಚಿಂತಿಸುತ್ತಿಲ್ಲ.

ಸಂಘಟಿತ ನಿರ್ವಾಹಕರ ಮೂಲಕ ಬುಕ್ ಮಾಡಿದ ಮತ್ತು ರದ್ದುಗೊಳಿಸಿದ ಜನರ ಸಂಖ್ಯೆ ದೊಡ್ಡದಾಗಿದೆ, ಆದರೆ ಅಸಂಘಟಿತ ನಿರ್ವಾಹಕರ ಮೂಲಕ ಹಾಗೆ ಮಾಡಿದವರ ಸಂಖ್ಯೆ ಇನ್ನೂ ಹೆಚ್ಚಾಗಿದೆ. ಮುಂದಿನ ಬಾರಿ ಟೂರಿಂಗ್ ಸೀಸನ್ ಅಕ್ಟೋಬರ್‌ನಿಂದ ಪ್ರಾರಂಭವಾದಾಗ ಮಾತ್ರ ಪ್ರವಾಸೋದ್ಯಮದ ಭವಿಷ್ಯ ತಿಳಿಯುತ್ತದೆ ಎನ್ನಲಾಗಿದೆ. ಸದ್ಯ ವರ್ಷಗಳ ಗಟ್ಟಲೆ ಜನ ಜಮ್ಮು ಕಡೆ ತಿರುಗಿ ನೋಡೋದಿಲ್ಲ ಎನ್ನಲಾಗಿದೆ.

ಟೂರಿಸ್ಟ್‌ಗಳನ್ನು ಭಯೋತ್ಪಾದಕರು ಯಾವ ಕರುಣೆ ಇಲ್ಲದೆ ತಮ್ಮ ಕುಟುಂಬದ ಮುಂದೆಯೇ ಗುಂಡಿಟ್ಟು ಕೊಂದಿದ್ದಾರೆ. ಜನರ ಮನಸ್ಸಿನಲ್ಲಿ ಈ ಕರಾಳ ದಿನ ಸದಾ ನೆನಪಿನಲ್ಲಿ ಉಳಿಯುತ್ತದೆ ಎನ್ನಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!