ಹೊಸದಿಗಂತ ಬೆಳಗಾವಿ:
ಪಾಕಿಸ್ತಾನದ ಮೇಲೆ ಯುದ್ಧ ಮಾಡುವುದು ಬೇಡ ಎಂದು ಹೇಳಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪಾಕಿಸ್ತಾನಕ್ಕೆ ಹೋದರೆ ಒಳ್ಳೆಯದು ಎಂದು ಸಂಸದ ಜಗದೀಶ್ ಶೆಟ್ಟರ್ ಕಿಡಿಕಾರಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯುದ್ಧ ಮಾಡೋದು, ಬಿಡುವುದು ಕೇಂದ್ರಕ್ಕೆ ಬಿಟ್ಟ ವಿಚಾರ. ಆದರೆ, ಸಿಎಂ ಹೇಳಿಕೆ ದೇಶಕ್ಕೆ ಅಪಮಾನ ತರುವಂತಹದ್ದಾಗಿದೆ ಎಂದರು.
ಜವಾಬ್ದಾರಿಯುತ ಸ್ಥಾನದಲ್ಲಿದ್ಜರೂ ಯುದ್ದದ ಅವಶ್ಯಕತೆ ಇಲ್ಲ ಎನ್ನುವ ಸಿಎಂ ಸಿದ್ದರಾಮಯ್ಯ ಪಾಕಿಸ್ತಾನದಲ್ಲಿ ಪಾಪ್ಯೂಲರ್ ಆಗಲು ಹೊರಟಿದ್ದಾರೆ. ಹೀಗಾಗಿ, ಅವರು ಪಾಕಿಸ್ತಾನಕ್ಕೆ ಹೋಗುವುದು ಒಳ್ಳೆಯದು ಎಂದು ಹೇಳಿದರು.
ಉಗ್ರರರು 28 ಜನರನ್ನು ಭೀಕರವಾಗಿ ಹತ್ಯೆ ಮಾಡಿದ್ದಾರೆ. ಇದಕ್ಕೆ ಸರಿಯಾದ ಪಾಠ ಕಲಿಸಬೇಕೆಂದು ಜನ ಒಕ್ಕೋರಲಿನಿಂದ ಆಗ್ರಹಿಸುತ್ತಿದ್ದಾರೆ. ಜನರ ಭಾವನೆ, ಆಕ್ರೋಶ ಇರುವ ಸಂದರ್ಭದಲ್ಲಿ.ಸಿದ್ದರಾಮಯ್ಯ ಅಲ್ಪಸಂಖ್ಯಾತರ ತುಷ್ಟೀಕರಣದ ಹಿನ್ನೆಲೆಯಲ್ಲಿ ಬೋಧನೆ ಆರಂಭ ಮಾಡಿದ್ದಾರೆ ಎಂದು ಶೆಟ್ಟರ ಆಕ್ರೋಶ ವ್ಯಕ್ತಪಡಿಸಿದರು.
ಇನ್ನು ಕೇಂದ್ರ ಸರ್ಕಾರ ಹಲವು ನಿರ್ಧಾರ ಕೈಗೊಂಡಿದೆ.ಸಿಂಧು ನದಿ ಒಪ್ಪಂದವನ್ನು ಸಹ ರದ್ದು ಮಾಡಲಾಗಿದೆ.ಯಾವ ಸಂದರ್ಭದಲ್ಲಿ ಯಾವ ನಿರ್ಧಾರ ಆಗಬೇಕು ಅದನ್ನು ಕೇಂದ್ರ ಮಾಡುತ್ತಿದೆ. ಅಧಿಕೃತವಾಗಿ ಕೇಂದ್ರ ಸರ್ಕಾರ ಯುದ್ಧ ಘೋಷಣೆ ಮಾಡಿಲ್ಲ. ಈ ಸಂದರ್ಭದಲ್ಲಿ ಪಾಕ್ ಅಲ್ಪಸಂಖ್ಯಾತರನ್ನು ಪ್ಲೀಸ್ ಮಾಡಲು ಕೀಳು ಮಟ್ಟದ ಹೇಳಿಕೆಯನ್ನು ಸಿಎಂ ನೀಡಿದ್ದಾರೆ.
ವಿಚಾರವನ್ನು ಅರ್ಥ ಮಾಡಿಕೊಳ್ಳದ ಸಿಎಂ ಇದ್ದಾರೆ. ಇಂತಹವರ ಬಗ್ಗೆ ನಮಗೆ ನಾಚಿಕೆ ಬರುತ್ತೆ. ಎಐಸಿಸಿ ಅಧ್ಯಕ್ಷರು ಸರ್ಕಾರಕ್ಕೆ ಬೆಂಬಲ ನೀಡಿದ್ದಾರೆ. ಆದರೆ ಸಿದ್ದರಾಮಯ್ಯ ತುಷ್ಟೀಕರಣ ನೀತಿಗೆ ಇಳಿದಿರುವುದು ಖಂಡನೀಯ ಎಂದು ಜಗದೀಶ್ ಶೆಟ್ಟರ ವಾಗ್ದಾಳಿ ನಡೆಸಿದರು.