ಮಗಳ ನಿಶ್ಚಿತ್ತಾರ್ಥ ಮುಗಿಸಿ ವಾಪಾಸಾಗುವಾಗ ದುರಂತ: ಭೀಕರ ಅಪಘಾತಕ್ಕೆ ಕುಟುಂಬ ಬಲಿ

ಹೊಸದಿಗಂತ ವರದಿ ಹುಬ್ಬಳ್ಳಿ:

ಮಗಳ ನಿಶ್ಚಿತಾರ್ಥಕ್ಕೆಂದು ತೆರಳಿದ್ದವರು ವಾಪಸ್ಸು ಮನೆಗೆ ಬರುತ್ತಿದ್ದಾಗ ಅಪಘಾತ ಸಂಭವಿಸಿ ನಿಶ್ಚಿತಾರ್ಥಗೊಂಡಿದ್ದ ಯುವತಿ ಶ್ವೇತಾ ಶೆಟ್ಟಿ ಸೇರಿದಂತೆ ಒಂದೇ ಕುಟುಂಬದ ಐವರು ಮೃತಪಟ್ಟಿದ್ದಾರೆ.

ಮಂಗಳವಾರ ಬೆಳಗಿನ ಜಾವ ತಾಲೂಕಿನ ಕಿರೇಸೂರ ಗ್ರಾಮ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತ ನಡೆದಿದೆ.

ಅಪಘಾತದಲ್ಲಿ ಮೃತ ಪಟ್ಟ ವಿಠಲ್ ಶೆಟ್ಟಿ ಅವರು ಕುಳಗೇರಿ ಕ್ರಾಸ್ ನಲ್ಲಿ ಕಳೆದ ಮೂರು ದಶಕಗಳಿಂದ ಹೋಟೆಲ್ ವ್ಯವಹಾರ ಮಾಡಿಕೊಂಡಿದ್ದರು. ಅವರ ಮಗಳಾದ ಶ್ವೇತಾ ಶೆಟ್ಟಿ ನಿಶ್ಚಿತಾರ್ಥಕ್ಕೆಂದು ಶಿವಮೊಗ್ಗ ಸಾಗರ ತಾಲೂಕಿನ ಹಾವಿನಹಳ್ಳಿ ಮೂರ್ಪಿಗೆ ತೆರಳಿದ್ದ ಅವರು ಮರಳಿ ಊರಿಗೆ ಹೋಗುವಾಗ ಈ ದುರ್ಘಟನೆ ನಡೆದಿದೆ.

ವಿಠಲ್ ಅವರಿಗೆ ಐವರು ಸಹೋದರರು ಇದ್ದಾರೆ. ಅಪಘಾತದಲ್ಲಿ ಮೃತಪಟ್ಟವರಲ್ಲಿ ನರಗುಂದದ ತಲಾಟೆ ಅಂಜಲಿ ಅವರು ಸಹ ಇದ್ದರು ಎಂದು ಮೃತ ಪಟ್ಟ ವಿಠಲ್ ಅವರ ಪರಿಚಯಸ್ಥರು ಮಾಹಿತಿ ನೀಡಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!