ದಿನಭವಿಷ್ಯ: ಇಂದು ಮನಸ್ಸಿಗೆ ತೋಚಿದ್ದನ್ನೆಲ್ಲಾ ಮಾಡಿ, ಆದರೆ ಮನಸ್ಸಿಗೆ ಬಂದಂತೆಲ್ಲಾ ಮಾಡಲೂಬೇಡಿ!

ಮೇಷ
ಸವಾಲು ಅನೇಕ. ಆದರೆ ಎದುರಿಸುವಲ್ಲಿ ಹಿಂಜರಿಕೆ ಬೇಡ. ದೇವರ ಕೃಪೆ ನಿಮಗಿದೆ. ನೆಗೆಟಿವ್ ಚಿಂತನೆಯ ವ್ಯಕ್ತಿಗಳ ಪ್ರಭಾವಕ್ಕೆ ಒಳಗಾಗದಿರಿ.

ವೃಷಭ
ಇಂದು ತಳೆಯುವ ನಿರ್ಧಾರಗಳು ಉತ್ತಮ -ಲ ನೀಡಲಿವೆ. ಚಿಂತೆ ಅನವಶ್ಯ. ಧಾರ್ಮಿಕ ವಿಚಾರದಲ್ಲಿ ಹೆಚ್ಚು ಆಸಕ್ತಿ. ಕ್ರೀಡಾಳುಗಳಿಗೆ ಯಶಸ್ಸು.

ಮಿಥುನ
ಏರುಪೇರಿನ ದಿನ. ಹಿನ್ನಡೆಗೆ ಕುಗ್ಗದೆ ಮುಂದುವರಿಯುವ ಛಲ ನಿಮ್ಮಲ್ಲಿದೆ. ಹಣದ ಹರಿವು ಉತ್ಸಾಹಕಾರಿಯಲ್ಲ. ಖರ್ಚು ಬಾಧಿಸಬಹುದು.

ಕಟಕ
ವ್ಯವಹಾರ ವಿಸ್ತರಣೆ ನಿಮ್ಮ ಇಂದಿನ ಗುರಿ. ಅದಕ್ಕೆ ಪೂರಕ ನಿರ್ಧಾರ ತಾಳಿ. ಚಿಕಿತ್ಸೆಗೆ ಸಂಬಂಧಿಸಿ ಅಧಿಕ ಖರ್ಚು ಒದಗಬಹುದು.

ಸಿಂಹ
ವೃತ್ತಿಯಲ್ಲಿ ಗುರಿ ಸಾಧಿಸುವಿರಿ. ಸಂತಾನ ಅಪೇಕ್ಷಿತರಿಗೆ ಶುಭ ಬೆಳವಣಿಗೆ. ಆರೋಗ್ಯ ವೃದ್ಧಿಗೆ ಯೋಗ, ಧ್ಯಾನ ಹಿತಕಾರಿಯಾದೀತು.

ಕನ್ಯಾ
ಕೆಲಸದಲ್ಲಿ ಉದಾಸೀನ ತೋರದಿರಿ. ನಿಮ್ಮ ಬದುಕಲ್ಲಿ ಕೆಲವು ಬದಲಾವಣೆ ಉಂಟಾಗಲಿದೆ. ಪ್ರಭಾವಿ ವ್ಯಕ್ತಿಯಿಂದ ಪ್ರೇರಣೆ ಪಡೆಯುವಿರಿ.

ತುಲಾ
ವ್ಯವಹಾರದಲ್ಲಿ ಸಣ್ಣಪುಟ್ಟ ತಪ್ಪು ಸಂಭವಿಸಬಹುದು. ಜಾಗ್ರತರಾಗಿರಿ. ಆರ್ಥಿಕ ಒತ್ತಡ. ಆರೋಗ್ಯದ ಬಗ್ಗೆ ಗಮನ ವಹಿಸಿ.

ವೃಶ್ಚಿಕ
ದಿನದಂತ್ಯದ ವೇಳೆಗೆ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸಿ. ನಿಮಗೆ ಕೆಟ್ಟದ್ದನ್ನು ಬಯಸುವ ವ್ಯಕ್ತಿಯಿಂದ ದೂರವಿರಿ. ಹಣದ ಕೊರತೆ ಕಾಡಲಿದೆ.

ಧನು
ವ್ಯಕ್ತಿಯೊಬ್ಬರ ಜತೆ ಹೆಚ್ಚಿನ ಆಪ್ತತೆ ಬೆಳೆಯಬಹುದು. ವೃತ್ತಿಯಲ್ಲಿ ಒತ್ತಡ ಹೆಚ್ಚು. ಆತ್ಮೀಯರ ಜತೆ ಅಭಿಪ್ರಾಯ ಭೇದ.

ಮಕರ
ಹಣದ ವಿಚಾರದಲ್ಲಿ ನಿರ್ಲಕ್ಷ್ಯ ಬೇಡ. ಮನಸ್ಸಿಗೆ ತೋಚಿದ್ದನ್ನು ಮಾಡಬೇಡಿ. ವಿವೇಕದಿಂದ ವರ್ತಿಸಿ. ತಪ್ಪು ನಡೆ ದೊಡ್ಡ ಹಾನಿ ಉಂಟು ಮಾಡೀತು.

ಕುಂಭ
ಅಸಾಧ್ಯವಾದುದನ್ನು ಸಾಧಿಸಲು ಬಯಸುವಿರಿ. ಆಂಶಿಕ ಯಶ ಸಿಗಲಿದೆ. ಕೌಟುಂಬಿಕ ಪರಿಸರ ಸೌಹಾರ್ದಕರ. ವಾಗ್ವಾದದಿಂದ ದೂರವಿರಿ.

ಮೀನ
ಉತ್ಸಾಹದ ದಿನ. ಕಷ್ಟಗಳು ದೂರವಾದ ನಿರಾಳತೆ. ಬೆನ್ನು ನೋವಿಂತಹ ಸಮಸ್ಯೆ ಕಾಡಬಹುದು. ಸೂಕ್ತ ಚಿಕಿತ್ಸೆ ಪಡೆಯಿರಿ.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!