ಹೊಸದಿಗಂತ ಡಿಜಿಟಲ್ ಡೆಸ್ಕ್:
ಪುಟಾಣಿ ಗೆಜ್ಜೆಯ ಸದ್ದು ಮಾಡುತ್ತಾ ಮೊದಲ ಪಾಠಶಾಲೆಗೆ ಬರುವ ಕಂದಮ್ಮಗಳು, ತಮ್ಮದೇ ವಯಸ್ಸಿನ ಸ್ನೇಹಿತರನ್ನು ಒಟ್ಟಿಗೇ ನೋಡಿ ಖುಷಿ ಪಡ್ತಾರೆ, ಆಟ ಆಡ್ತಾರೆ, ಅ ಆ ಇ ಈ ಕಲೀತಾರೆ, ಅಮ್ಮನಿಗೆ ಕಾಟ ಕೊಟ್ಟು ಊಟ ಮಾಡುತ್ತಿದ್ದ ಮಕ್ಕಳು, ತಾವೇ ಊಟ ಮಾಡ್ತಾರೆ. ಮಕ್ಕಳನ್ನು ಸ್ವಾವಲಂಬಿ ಮಾಡುವ, ಆತ್ಮವಿಶ್ವಾಸ ತುಂಬುವ ಮೊದಲ ಹೆಜ್ಜೆ ಅಂಗನವಾಡಿ..
ಈ ನೆಚ್ಚಿನ ಮನೆ ಆರಂಭವಾಗಿ ಅಕ್ಟೋಬರ್ಗೆ 50 ವರ್ಷಗಳು ತುಂಬಲಿವೆ. ಈ ಹಿನ್ನೆಲೆಯಲ್ಲಿ ಸುವರ್ಣ ಮಹೋತ್ಸವ ಆಚರಣೆಗೆ ನಿರ್ಧರಿಸಲಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಮಾಹಿತಿ ನೀಡಿದರು.
ವಿಧಾನಸೌಧ ಸಮ್ಮೇಳನ ಸಭಾಂಗಣದಲ್ಲಿ ಸೋಮವಾರ ಏರ್ಪಡಿಸಿದ್ದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಮಗ್ರ ಶಿಶು ವಿಕಾಸ ಯೋಜನೆ ಬೆಂಗಳೂರು ಮತ್ತು ಮೈಸೂರು ವಿಭಾಗದ ಪ್ರಗತಿ ಪರಿಶೀಲನಾ ಸಭೆ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು.
ಅರಮನೆ ಮೈದಾನದಲ್ಲಿ ಕಾರ್ಯಕ್ರಮ ಆಯೋಜಿಸಲು ತೀರ್ಮಾನಿಸಿದ್ದೇವೆ. ಕೇಂದ್ರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಅನ್ನಪೂರ್ಣ ದೇವಿಯವರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಲಾಗುವುದು. ಈ ಸಂಬಂಧ “ನಾವು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಚರ್ಚಿಸಿದ್ದೇವೆ.
ಒಂದು ಲಕ್ಷಕ್ಕೂ ಹೆಚ್ಚು ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರು ಮತ್ತು ಇತರರು ಈ ಕಾರ್ಯಕ್ರಮಕ್ಕೆ ಹಾಜರಾಗಲಿದ್ದಾರೆ ಎಂದು ಅವರು ಹೇಳಿದರು. ಸಮಗ್ರ ಮಕ್ಕಳ ಅಭಿವೃದ್ಧಿ ಸೇವೆಗಳ (ಐಸಿಡಿಎಸ್) ಸಭೆಯನ್ನು ಪರಿಶೀಲಿಸಿದ ಹೆಬ್ಬಾಳ್ಕರ್, ಎಲ್ಕೆಜಿ ಮತ್ತು ಯುಕೆಜಿ ತರಗತಿಗಳನ್ನು ಪ್ರಾರಂಭಿಸುವ ಬಗ್ಗೆ ಒತ್ತಿ ಹೇಳಿದರು.