ಸಿಂಧೂ ನದಿಯ ಒಂದೇ ಒಂದು ಹನಿಯೂ ಪಾಕಿಸ್ತಾನಕ್ಕೆ ಸಿಗಲ್ಲ: ಪ್ರಧಾನಿ ಮೋದಿ ಖಡಕ್ ಸಂದೇಶ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಸಿಂಧೂ ನದಿ ನೀರು ಒಪ್ಪಂದದ ಅಮಾನತು ಮುಂದುವರಿಸಿರುವುದನ್ನು ಪುನರುಚ್ಚರಿಸುತ್ತಾ, ಭಾರತದ ನದಿಗಳಿಂದ ಪಾಕಿಸ್ತಾನ ನೀರು ಪಡೆಯುವುದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಪುನರುಚ್ಚರಿಸಿದ್ದಾರೆ.

ರಾಜಸ್ಥಾನದ ಬಿಕಾನೇರ್‌ನ ದೇಶ್ನೋಕ್‌ನಲ್ಲಿ ನಡೆದ ಸಾರ್ವಜನಿಕ ರ್ಯಾಲಿಯಲ್ಲಿ ಮಾತನಾಡಿದ ಪ್ರಧಾನಿ, ಭಯೋತ್ಪಾದನೆಯ ಬಗ್ಗೆ ಪಾಕಿಸ್ತಾನಕ್ಕೆ ದೊಡ್ಡ ಸಂದೇಶವನ್ನು ರವಾನಿಸಿದರು. ಇಸ್ಲಾಮಾಬಾದ್ “ಭಯೋತ್ಪಾದಕರನ್ನು ರಫ್ತು ಮಾಡುವುದನ್ನು ಮುಂದುವರಿಸಿದರೆ, ಅದು ಪ್ರತಿ ಪೈಸೆಗೂ ಭಿಕ್ಷೆ ಬೇಡಬೇಕಾಗುತ್ತದೆ” ಎಂದು ಹೇಳಿದರು.

“ಭಾರತಕ್ಕೆ ಸೇರಿದ ಒಂದು ಹನಿ ನೀರನ್ನು ಪಾಕಿಸ್ತಾನಕ್ಕೆ ನೀಡಲಾಗುವುದಿಲ್ಲ. ಭಾರತೀಯರ ರಕ್ತದ ಜೊತೆ ಆಟವಾಡುವುದರಿಂದ ಪಾಕಿಸ್ತಾನಕ್ಕೆ ಭಾರಿ ನಷ್ಟವಾಗುತ್ತದೆ. ಇದು ಭಾರತದ ಸಂಕಲ್ಪ ಮತ್ತು ಈ ಬದ್ಧತೆಯಿಂದ ನಮ್ಮನ್ನು ತಡೆಯಲು ಜಗತ್ತಿನಲ್ಲಿ ಯಾರಿಗೂ ಸಾಧ್ಯವಿಲ್ಲ” ಎಂದು ಖಡಕ್ ಸಂದೇಶ ನೀಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!