ದಿನಭವಿಷ್ಯ: ಅತಿ ಕರುಣೆಯಿಂದ ತೊಂದರೆ, ಶತ್ರುಗಳು ಕೂಡ ಇಂದು ಮಿತ್ರರಾಗುವರು

ಮೇಷ
ಏನನ್ನು ಮಾಡಲೂ ಉದಾಸೀನ. ಹಲವಾರು ವಿಚಾರಗಳ ತಾಕಲಾಟ.  ಮೌನವಾಗಿ ಕೊರಗದಿರಿ, ಹಂಚಿಕೊಳ್ಳಿ. ಸಮಾಧಾನ, ಪರಿಹಾರ ದೊರಕೀತು.
ವೃಷಭ
ಎಂದಿನಂತಿರಲಾರಿರಿ ನೀವು. ಆರೋಗ್ಯ ಸಮಸ್ಯೆ.    ಕೆಲ ವಿಷಯಗಳಲ್ಲಿ ಅನಿಶ್ಚಿತತೆ ಕಾಡಲಿದೆ. ಲೆಕ್ಕಪತ್ರದ ವಿಚಾರದಲ್ಲಿ ಹೆಚ್ಚು ಜಾಗ್ರತರಾಗಿರಿ.
ಮಿಥುನ
ನಿಮ್ಮ ವರ್ತನೆ ಸಮಯಕ್ಕೆ ತಕ್ಕಂತಿರಲಿ. ಇಲ್ಲವಾದರೆ ಟೀಕೆಗೆ ಗುರಿಯಾಗುವಿರಿ.   ನಿಮ್ಮ ಭಾವನೆ ಉದ್ದೀಪಿಸುವ ವ್ಯಕ್ತಿಗಳ ಒಡನಾಟ.
ಕಟಕ
ಹಣದ ತೊಂದರೆ ಕಾಣಿಸಬಹುದು. ಅನವಶ್ಯ ಖರ್ಚಿಗೆ ತಡೆ ಹಾಕಿ.  ಕಷ್ಟಕಾಲ ಕಳೆಯಲು ಕಾಯುವುದೊಳಿತು.  ಕೌಟುಂಬಿಕ ಭಿನ್ನಮತ.
ಸಿಂಹ
ಇತರರ ಉತ್ತಮ ಸಲಹೆ ಕೇಳಲು ಅಹಂ ಅಡ್ಡಿ ಬಾರದಿರಲಿ.   ಅತಿರೇಕದ ವರ್ತನೆ ತೋರದಿರಿ. ಅದರಿಂದ ಪ್ರತಿಕೂಲವಾದೀತು.
ಕನ್ಯಾ
ಕರ್ತವ್ಯದಲ್ಲಿ ಏಕಾಗ್ರತೆ ಕಡಿಮೆ. ಮನೆ ಮತ್ತು ಆಪ್ತರ ಕುರಿತಂತೆ ಮನಸ್ಸು ಹರಿದಾಡಲಿದೆ. ಜಗಳದಿಂದ ದೂರವಿರಿ. ಕೌಟುಂಬಿಕ ಸಮ್ಮಿಲನ.
ತುಲಾ
ಕೌಟುಂಬಿಕ ಹೊಣೆ ಹೆಚ್ಚಳ. ಕೆಲವೊಮ್ಮೆ ಇದು ನಿಮಗೆ ದೊಡ್ಡ ಹೊರೆ ಎನಿಸುವುದು. ಮುಖದಲ್ಲಿ  ನಗುವಿಟ್ಟುಕೊಂಡು ನಿಮ್ಮ ಹೊಣೆ ನಿಭಾಯಿಸಿ.
ವೃಶ್ಚಿಕ
ವೃತ್ತಿಯಲ್ಲಿ ಕೆಲವು ಅಡೆತಡೆ ಭಾದಿಸುವುದು.  ಸಮಾಧಾನದಿಂದ ನಿಭಾಯಿಸಿ. ಕೌಟುಂಬಿಕ ಉದ್ವಿಗ್ನತೆ ಶಮನಕ್ಕೆ ಹೆಚ್ಚು ಗಮನ ಕೊಡಿ.
ಧನು
ಗ್ರಹಗತಿ ನಿಮಗೆ ಪೂರಕವಾಗಿಲ್ಲ. ಖರ್ಚು ಅಽಕ. ಅಸಂತೃಪ್ತಿಯೂ ಹೆಚ್ಚಲಿದೆ. ಒಂದೆರಡು ದಿನ ಕಾಯಿರಿ. ಆಪ್ತರ ಸಂಗದಲ್ಲಿ ಸಾಂತ್ವನ.
ಮಕರ
ಕೆಲಸದಲ್ಲಿ ಜಡತ್ವ. ಹಾಗೆಂದು ಮುಖ್ಯ ಕೆಲಸವನ್ನು ಮರೆಯದಿರಿ. ಅದನ್ನು ಮಾಡಿ ಮುಗಿಸಿ. ಆತ್ಮೀಯ ಬಂಧುಗಳ ಭೇಟಿಯಾದೀತು.
ಕುಂಭ
ಇಂದು ನೀವು ಸೂಕ್ಷ್ಮಸಂವೇದಿಯಾಗಿ  ವರ್ತಿಸುವಿರಿ. ಸಣ್ಣ ವಿಷಯವೂ ಹೆಚ್ಚಿನ ಭಾವಾವೇಶಕ್ಕೆ ಕಾರಣವಾಗಲಿದೆ.
ಮೀನ
ಮಾನಸಿಕ ಬಳಲಿಕೆ. ಇದು ದೇಹದ ಮೇಲೂ ಪರಿಣಾಮ ಬೀರಲಿದೆ. ನಿಮ್ಮ ಸುತ್ತ ಇರುವ ಕುಟಿಲ ಬುದ್ಧಿಯವರ ಕುರಿತು ಎಚ್ಚರದಿಂದಿರಿ.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!