ಮಚ್ಚಿನಿಂದ ಕತ್ತು ಕತ್ತರಿಸಿಕೊಂಡು ಆತ್ಮಹತ್ಯೆಗೆ ಯತ್ನಿಸಿದ ಮಾನಸಿಕ ಅಸ್ವಸ್ಥ

ಹೊಸದಿಗಂತ ವರದಿ, ಪಾಂಡವಪುರ :

ಮಾನಸಿಕ ಅಸ್ವಸ್ಥ ಯುವಕ ಆತ್ಮಹತ್ಯೆಗೆ ವಿಫಲ ಪ್ರಯತ್ನ ನಡೆಸಿ ಆಸ್ಪತ್ರೆಗೆ ದಾಖಲಾಗಿರುವ ಘಟನೆ ಭಾನುವಾರ ನಡೆದಿದೆ.

ಉತ್ತರ ಕರ್ನಾಟಕ ಮೂಲದ ಸುಮಾರು 28 ವರ್ಷದ ಮಾನಸಿಕ ಅಸ್ವಸ್ಥ ಯುವಕ ಭಾನುವಾರ ಬೆಳಗ್ಗೆ 9.30 ರ ಸಮಯದಲ್ಲಿ ತನ್ನ ಹುಚ್ಚಾಟದಿಂದ ಪಿಎಸ್‌ಎಸ್‌ಕೆ ಕಾರ್ಖಾನೆ ಬಳಿಯ ರೈಲ್ವೆ ನಿಲ್ದಾಣದ ಮೇಲ್ಸೆತುವೆಯಿಂದ ಜಿಗಿದು ವಿದ್ಯುತ್ ತಂತಿ ನಡುವೆ ಸಿಲುಕಿಕೊಂಡಿದ್ದಾನೆ.

ಈ ಸಮಯದಲ್ಲಿ ವಿದ್ಯುತ್ ಸರಬರಾಜು ಸ್ಥಗಿತವಾಗಿದ್ದ ಕಾರಣ ಯಾವುದೇ ಅಪಾಯ ಸಂಭವಿಸಿಲ್ಲ. ಬಳಿಕ ವಿದ್ಯುತ್ ತಂತಿ ಹಿಡಿದು ನೇತಾಡಿಕೊಂಡು ಕೆಳಗೆ ಜಿಗಿದಿದ್ದಾನೆ. ಆಗಲೂ ಯಾವುದೇ ಪ್ರಾಣಾಯಪಾಯವಿಲ್ಲದೆ ಬದುಕುಳಿದಿದ್ದ.

ನಂತರ ಆ ವ್ಯಕ್ತಿ ಪಿಎಸ್‌ಎಸ್‌ಕೆ ಶಾಲೆ ಕಾಪೌಂಡ್ ಪಕ್ಕದಲ್ಲಿ ಇದ್ದ ಎಳನೀರು ವ್ಯಾಪಾರಿ ಬಳಿ ಬಂದು ಮಚ್ಚು ಕಸಿದು ರಂಪಾಟ ನಡೆಸಿದ್ದಾನೆ. ನಂತರ ಮಚ್ಚಿನಿಂದ ಕುತ್ತಿಗೆ ಕೂಯ್ದುಕೊಂಡಿದ್ದಾನೆ. ಯುವಕನ ಹುಚ್ಚಾಟವನ್ನು ಸ್ಥಳೀಯರ ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದಾರೆ. ಘಟನೆಯಿಂದ ಸ್ಥಳದಲ್ಲಿ ಕೆಲಕಾಲ ಆತಂಕ ಉಂಟಾಗಿತ್ತು.

ರಕ್ತದ ಮಡುವಿನಲ್ಲಿ ನರಳಾಡುತ್ತಿದ್ದ ಯುವಕನ್ನು ಸಾರ್ವಜನಿಕರ ದೂರಿನ ಮೇರೆ ಪೊಲೀಸರು ಮೈಸೂರಿನ ಕೆ.ಆರ್.ಆಸ್ಪತ್ರೆಗೆ ದಾಖಲಿಸಿದ್ದಾರೆ.
ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!