ದಿನಭವಿಷ್ಯ: ಕೆಲವು ವಿಷಯಗಳ ಬಗ್ಗೆ ಮುಜುಗರ ಬೇಡ, ಮುಕ್ತವಾಗಿ ಚರ್ಚಿಸಿದರೆ ಪರಿಹಾರ ಇದೆ

ಮೇಷ
ವೃತ್ತಿ ಮತ್ತು ಖಾಸಗಿ ವ್ಯವಹಾರದಲ್ಲಿ ಹಿನ್ನಡೆ ಸಂಭವ. ಅದಕ್ಕೆ ಕಾರಣ ನಿಮ್ಮ ಮನಸ್ಥಿತಿ. ಉತ್ಸಾಹ ರಹಿತರಾಗಿ ವರ್ತಿಸದಿರಿ. ಆಶಾವಾದಿಯಾಗಿರಿ.

ವೃಷಭ
ಕಾಲಮಿತಿಯಲ್ಲಿ ಕೆಲಸ ಮುಗಿಸಬೇಕಾದ ಒತ್ತಡ. ಸೂಕ್ತ ಸಹಾಯ ಸಿಗದೆ ಅಸಹನೆ. ದುಂದುವೆಚ್ಚ ತಪ್ಪಿಸಿ. ಕೌಟುಂಬಿಕ ಮನಸ್ತಾಪ.

ಮಿಥುನ
ಇಂದು ವಿವಾದಕ್ಕೆ ಸಿಲುಕದಂತೆ ಎಚ್ಚರ ವಹಿಸಿ. ಮಾತು, ವರ್ತನೆಯಲ್ಲಿ ಸಂಯಮ ಪ್ರದರ್ಶಿಸಿ. ಇತರರ ಮಾತಿಗೆ ಕೋಪಗೊಳ್ಳದಿರಿ.

ಕಟಕ
ಯಾವುದೂ ಇಂದು ಸುಲಭದಲ್ಲಿ -ಲಿಸದು. ಕಠಿಣ ಪ್ರಯತ್ನದ ಬಳಿಕ ಫಲ. ಜಡತೆ ಬಿಟ್ಟು ಕೆಲಸ ಮಾಡಿ. ಆರೋಗ್ಯ ಸಮಸ್ಯೆ ಕಾಡಬಹುದು.

ಸಿಂಹ
ಕೆಲವು ವಿಷಯದ ಬಗ್ಗೆ ಮುಕ್ತ ಮನಸ್ಸಿನಿಂದ ಪರಾಮರ್ಶಿಸಿ.  ನಿಮ್ಮ ಧೋರಣೆ ಬದಲಿಸುವ ಪ್ರಸಂಗ ಒದಗೀತು. ಜಿಗುಟು ನಿಲುವು ಬಿಡಿ.

ಕನ್ಯಾ
ಅಸಹನೆ ಹೆಚ್ಚುವ ಪ್ರಸಂಗ. ಹೊಣೆಯತ್ತ ಗಮನ ಇರಲಿ, ಬೇರೆಡೆ ಮನಸ್ಸು ಹರಿಯದಂತೆ ನೋಡಿ. ನೆಗಡಿ ಸಂಬಂಧ ಅನಾರೋಗ್ಯ.

ತುಲಾ
ಇತರರ ಮನಸ್ಥಿತಿ ಅರಿತು ವ್ಯವಹರಿಸಿ. ನಿಮ್ಮದೇ ನಿಲುವನ್ನು ಅವರ ಮೇಲೆ ಹೇರಬೇಡಿ. ಶೀತಲ ಸಮರಕ್ಕೆ  ಆಸ್ಪದ ಕಲ್ಪಿಸಬೇಡಿ.

ವೃಶ್ಚಿಕ
ಸಮಾಧಾನದಿಂದ ಕಾರ್ಯ ನಿರ್ವಹಿಸಿ. ಅವಸರ ಕೆಲಸ ಕೆಡಿಸೀತು.ಕೋಪತಾಪ ನಿಯಂತ್ರಿಸಿ. ಕುಟುಂಬದಲ್ಲಿ ಸಾಮರಸ್ಯ ಕಾಪಾಡಿಕೊಳ್ಳಿ.

ಧನು
ವೃತ್ತಿಯಲ್ಲಿ ಪೂರಕ ಪರಿಸ್ಥಿತಿ. ಮನೆಯ ಸದಸ್ಯರ ಜತೆ ಹೆಚ್ಚು ಕಾಲ ಕಳೆಯಲು ಯತ್ನಿಸಿ. ಅವರನ್ನು ಕಡೆಗಣಿಸಿದ ಭಾವ ಮೂಡದಿರಲಿ.

ಮಕರ
ಆಪ್ತರ ಜತೆ ಭಿನ್ನಾಭಿಪ್ರಾಯ. ಕುಟುಂಬ ಸದಸ್ಯರಿಗೆ ವ್ಯವಹಾರದಲ್ಲಿ  ಹಿನ್ನಡೆ. ಹವಾಮಾನ ಸಂಬಂಽ ಅನಾರೋಗ್ಯ.

ಕುಂಭ
ಹಲವಾರು ಕೆಲಸ ಇದೇ ದಿನ ಮುಗಿಸ ಬೇಕಾದ ಒತ್ತಡ. ಮನೆ ಯವರ ಜತೆ ಕಾಲ ಕಳೆಯಿರಿ. ಒತ್ತಡ ಮಾಯವಾಗಲಿದೆ.

ಮೀನ
ಇತರರ ಭಾವನೆಗೆ ಸರಿಯಾಗಿ ಸ್ಪಂದಿಸುವ ಮೂಲಕ ಆತ್ಮೀಯತೆ ಬೆಳೆಸಿಕೊಳ್ಳಿ. ಆರ್ಥಿಕ ಪರಿಸ್ಥಿತಿ ಚೇತರಿಕೆ. ಕೌಟುಂಬಿಕ ನೆಮ್ಮದಿ.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!