ದಿನಭವಿಷ್ಯ: ಈ ರಾಶಿಯವರಿಗೆ ಅನಗತ್ಯ ಒತ್ತಡ ಎನಿಸಿದರೆ ಸಂಗಾತಿ ಜೊತೆ ಮಾತನಾಡಿ!

ಮೇಷ
ವೃತ್ತಿಯ ಒತ್ತಡ ಇಂದು ಬಾಧಿಸದು. ಎಲ್ಲವೂ ಸುಗಮ.  ಆರೋಗ್ಯದ ಕಡೆ ಹೆಚ್ಚು ಗಮನ ಕೊಡಿ. ಶೀತ ಸಂಬಂಧ ಸಮಸ್ಯೆ ಸಂಭವ.

ವೃಷಭ
ವ್ಯವಹಾರದಲ್ಲಿ   ನಿಮಗಿಂದು ಪೂರಕ ಬೆಳವಣಿಗೆ. ಒತ್ತಡ ನಿವಾರಣೆ. ಆರೋಗ್ಯ ಸಮಸ್ಯೆ ನಿವಾರಣೆ. ಬಂಧುಗಳ ಭೇಟಿ.

ಮಿಥುನ
ಕುಟುಂಬ ಸದಸ್ಯರ ಬೇಡಿಕೆಗೆ ಗಮನ ಕೊಡಿ. ಅವರ ಅನಿಸಿಕೆಗೂ ಆದ್ಯತೆ ನೀಡಿ. ಸಣ್ಣ ವಿವಾದವನ್ನು ಹಿಗ್ಗಿಸಬೇಡಿ. ತಾಳ್ಮೆಯ ವರ್ತನೆ ಅಗತ್ಯ.

ಕಟಕ
ಕೆಲಸದ ಒತ್ತಡ ಅಧಿಕ. ಆತುರದ ತೀರ್ಮಾನ ಕೆಟ್ಟ ಫಲ ನೀಡೀತು. ಶಾಂತ ಚಿತ್ತರಾಗಿ ನಿರ್ಧಾರ ತೆಗೆದುಕೊಳ್ಳಿ.

ಸಿಂಹ
ಅಪ್ರಿಯ ಪ್ರಸಂಗ ಉಂಟಾದೀತು. ವಿಶ್ವಾಸ ಕುಂದದಂತೆ ನೋಡಿಕೊಳ್ಳಿ. ಚಿಂತೆ ಅನವಶ್ಯ. ಅಂತಿಮವಾಗಿ ನಿಮಗೆ ಒಳಿತೇ ಆಗಲಿದೆ.

ಕನ್ಯಾ
ಬಿಕ್ಕಟ್ಟು ಒದಗಿದಾಗ ಅಽರರಾಗಬೇಡಿ. ಪರಿಹಾರದ ದಾರಿ ಹುಡುಕಿ. ಕೊರಗುತ್ತಾ ಕೂತರೆ ಫಲವಿಲ್ಲ. ಹಣದ ಖರ್ಚು ಅಧಿಕ.

ತುಲಾ
ನಿಮ್ಮ ವಿರೋಧಗಳನ್ನು  ಒಲಿಸಿಕೊಳ್ಳುವ ಪ್ರಯತ್ನ ಬಿಡಿ. ಅದು ಫಲ ನೀಡದು. ನಿಮ್ಮ ಜತೆ ನಿಲ್ಲುವವರನ್ನು ಕೈಬಿಡಬೇಡಿ.

ವೃಶ್ಚಿಕ
ಹದಗೆಟ್ಟ ಸಂಬಂಧ ಸುಧಾರಿಸಲಿದೆ. ನಿಮ್ಮಿಂದ ಹೊಂದಾಣಿಕೆಯ ನೀತಿಯೂ ಅವಶ್ಯ. ಎಲ್ಲವನ್ನು ವಿರೋಽಸುವ ಹವ್ಯಾಸ ತ್ಯಜಿಸಿ.

ಧನು
ಉದ್ಯೋಗ ಬದಲಾವಣೆ ಬಯಸಿದ್ದರೆ  ಪೂರಕ ಬೆಳವಣಿಗೆ. ಸೂಕ್ತ ನೆರವೂ ಸಿಗಲಿದೆ. ಕೌಟುಂಬಿಕ ಸಮಾಧಾನ.   ಆರ್ಥಿಕ ಉನ್ನತಿ.

ಮಕರ
ಕೋಪತಾಪ ನಿಯಂತ್ರಿಸಿ. ಅದರಿಂದ ಕೆಲವರ ವಿರೋಧ ಕಟ್ಟಿಕೊಳ್ಳುವಿರಿ. ಸಂಯಮದ ನಡೆ ಅಗತ್ಯ. ಇತರರ ಟೀಕೆ ಕೇಳುವಿರಿ.

ಕುಂಭ
ನಿಮ್ಮ ಹೊಣೆಯನ್ನು ಸಮಾಧಾನದಿಂದ ನಿಭಾಯಿಸಿ. ಅನವಶ್ಯ ಒತ್ತಡ ನೀವೇ ತಂದುಕೊಳ್ಳದಿರಿ. ಸಂಗಾತಿ ಯಿಂದ ಸಹಕಾರ.

ಮೀನ
ಕೆಲವು ದಿನಗಳ ಚಿಂತೆ ತುಸು ಪರಿಹಾರ. ಒಳ್ಳೆಯ ದಿನಗಳ ಸೂಚನೆ ಲಭಿಸಲಿದೆ. ಮನೆಯಲ್ಲಿ ವಾಗ್ವಾದಕ್ಕೆ ಅವಕಾಶ ಕೊಡದಿರಿ.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!