ನಾಲ್ವಡಿ ಕೃಷ್ಣರಾಜ ಒಡೆಯರ್ ಪ್ರತಿಮೆ ಮೇಲೆ ಕುಳಿತು ವ್ಯಕ್ತಿಯ ಹುಚ್ಚಾಟ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ನಾಲ್ವಡಿ ಕೃಷ್ಣರಾಜ ಒಡೆಯರ್ ಪ್ರತಿಮೆ ಮೇಲೆ ಕುಳಿತು ವ್ಯಕ್ತಿಯೊಬ್ಬ ವಿಕೃತವಾಗಿ ವರ್ತಿಸಿದ್ದಾನೆ.

ಪ್ರತಿಮೆ ಮೇಲೆ ಕುಳಿತುಕೊಂಡಿದ್ದಲ್ಲದೇ ಬಾಯಿಗೆ ಬೀಡಿ ಇಟ್ಟು ವ್ಯಕ್ತಿಯೋರ್ವ ವಿಕೃತವಾಗಿ ವರ್ತಿಸಿರುವಂತಹ ಘಟನೆ ಮೈಸೂರು ನಗರದ ಕೆ.ಆರ್​.ವೃತ್ತದಲ್ಲಿ ನಡೆದಿದೆ.

ವ್ಯಕ್ತಿಯ ಹುಚ್ಚಾಟ ಕಂಡು ಕೆಲ ಕಾಲ ಜನರು ಗಾಬರಿಯಾಗಿದ್ದರು. ಸದ್ಯ ಪರಾರಿಯಾಗಿರುವ ವ್ಯಕ್ತಿಯ ಪತ್ತೆಗೆ ದೇವರಾಜ ಠಾಣೆ ಪೊಲೀಸರು ಮುಂದಾಗಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!