ಅಸ್ಸಾಂನಲ್ಲಿ ಭಾರೀ ಮಳೆ, ಪ್ರವಾಹ ಭೀತಿ: ರಸ್ತೆ-ರೈಲು ಸಾರಿಗೆ ಸ್ಥಗಿತ, 8 ಮಂದಿ ಸಾವು

ಹೊಸದಿಗಂತ ಡಿಜಿಟಲ್ ಡೆಸ್ಕ್:

ಅಸ್ಸಾಂನಲ್ಲಿ ಇಂದು ಕೂಡ ಭಾರೀ ಮಳೆ ಮುಂದುವರಿದಿದ್ದು, ಮಳೆಯಿಂದ ಉಂಟಾದ ಪ್ರವಾಹದಿಂದ ಈಗಾಗಲೇ ಉಂಟಾಗಿದ್ದ ಸೂಕ್ಷ್ಮ ಪರಿಸ್ಥಿತಿಯನ್ನು ಇನ್ನಷ್ಟು ಹದಗೆಡಿಸಿದೆ. ಈಶಾನ್ಯ ರಾಜ್ಯದಲ್ಲಿ ಮಳೆ, ಪ್ರವಾಹ ಮತ್ತು ಭೂಕುಸಿತಗಳು ರಸ್ತೆ ಸಾರಿಗೆ ಮತ್ತು ರೈಲು ಸೇವೆಗಳನ್ನು ಅಸ್ತವ್ಯಸ್ತಗೊಳಿಸಿದ್ದು, ಇದುವರೆಗೆ ಕನಿಷ್ಠ ಎಂಟು ಜನರನ್ನು ಬಲಿ ತೆಗೆದುಕೊಂಡಿವೆ. 15 ಜಿಲ್ಲೆಗಳಲ್ಲಿ 78000 ಕ್ಕೂ ಹೆಚ್ಚು ಜನರು ಹವಾಮಾನದಿಂದ ಪ್ರಭಾವಿತರಾಗಿದ್ದಾರೆ.

ಬ್ರಹ್ಮಪುತ್ರ ಮತ್ತು ಬರಾಕ್ ಸೇರಿದಂತೆ ಅಸ್ಸಾಂನ 10 ಪ್ರಮುಖ ನದಿಗಳು ಅಪಾಯದ ಮಟ್ಟಕ್ಕಿಂತ ಹೆಚ್ಚಾಗಿ ಹರಿಯುತ್ತಿದ್ದು, ಹಲವಾರು ಜಿಲ್ಲೆಗಳಲ್ಲಿ ಪ್ರವಾಹದಂತಹ ಪರಿಸ್ಥಿತಿ ಉಂಟಾಗಿದೆ ಎಂದು ಕೇಂದ್ರ ಜಲ ಆಯೋಗ ಜನಸಾಮಾನ್ಯರಿಗೆ ತಿಳಿಸಿದೆ.

ಕೆಟ್ಟ ಹವಾಮಾನವು ರೈಲು ಸೇವೆಗಳ ಮೇಲೂ ಪರಿಣಾಮ ಬೀರಿದೆ. ಕಳೆದ 24 ಗಂಟೆಗಳಲ್ಲಿ ಭಾರಿ ಮಳೆಯಾಗುತ್ತಿರುವುದರಿಂದ ಮತ್ತು ಬರೈಗ್ರಾಮ್-ದುಲ್ಲಾಬ್ಚೆರಾ ವಿಭಾಗದಲ್ಲಿ ಹಳಿಗಳ ಮೇಲೆ ನೀರು ಹರಿಯುತ್ತಿರುವುದರಿಂದ, ದುಲ್ಲಾಬ್ಚೆರಾ-ಸಿಲ್ಚಾರ್ ಪ್ಯಾಸೆಂಜರ್ ರೈಲನ್ನು ಇಂದು ರದ್ದುಗೊಳಿಸಲಾಗಿದೆ ಎಂದು ಈಶಾನ್ಯ ಗಡಿನಾಡು ರೈಲ್ವೆ ವಕ್ತಾರರು ತಿಳಿಸಿದ್ದಾರೆ. ದುಲ್ಲಾಬ್ಚೆರಾ-ಗುವಾಹಟಿ ಎಕ್ಸ್‌ಪ್ರೆಸ್ ದುಲ್ಲಾಬ್ಚೆರಾ ಬದಲಿಗೆ ಬರೈಗ್ರಾಮ್‌ನಿಂದ ಪ್ರಾರಂಭವಾಗಲಿದೆ ಎಂದು ತಿಳಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!