ಹೊಸ ದಿಗಂತ ವರದಿ,ಹುಬ್ಬಳ್ಳಿ:
ಇಲ್ಲಿಯ ಎಸ್.ಎಂ. ಕೃಷ್ಣಾ ನಗರದ ನಿವಾಸಿ ಬಾಷಾಸಾಬ ಸಂಕೇಶ್ವರ(೫೦) ಮನೆಯಲ್ಲಿ ನೇಣು ಹಾಕಿಕೊಂಡು ಮೃತಪಟ್ಟಿರುವ ಘಟನೆ ಭಾನುವಾರ ರಾತ್ರಿ ನಡೆದಿದೆ.
ಸಾಲಗಾರರ ಕಿರುಕುಳದಿಂದ ಆತ್ಮ ಹತ್ಯೆ ಮಾಡಿಕೊಂಡಿದ್ದಾರೆ ಎಂದು ಮೃತನ ಕುಟುಂಬಸ್ಥರು ಆರೋಪಿಸಿದ್ದಾರೆ. ಬಾಷಾಸಾಬ ಕೆಲವರ ಹತ್ತಿರ ಸಾಲ ಪಡೆದಿದ್ದರು. ಸಾಲನೀಡಿದ ಅವರು ನಿತ್ಯ ಕಿರುಕುಳ ನೀಡುತ್ತಿದ್ದರು. ಇದರಿಂದ ಮನನೊಂದು ಆತ್ಮ ಹತ್ಯೆ ಮಾಡಿಕೊಂಡಿದ್ದಾರೆ ಎಂದು ಮೃತ ಪುತ್ರ ಅರ್ಷಾನ್ ಆರೋಪಿಸಿದ್ದಾರೆ.
ಇನ್ನೂ ಸ್ವತಃ ಬಾಷಾಸಾಬ ಅವರು ಸಾಲ ಕೊಟ್ಟ ವ್ಯಕ್ತಿಗಳು ಕಿರುಕುಳ ನೀಡಿರುವ ಕುರಿತು ನೋವು ತೊಡಿಕೊಂಡಿರುವ ಬಗ್ಗೆ ವಿಡಿಯೋ ಚಿತ್ರೀಕರಣ ಮಾಡಿದ್ದಾರೆ. ಮೃತನ ಕುಟುಂಬಸ್ಥರು ಆತ್ಮಹತ್ಯೆ ಮಾಡಿಕೊಂಡಿರುವ ಕುರಿತು ಪ್ರಕರಣ ದಾಖಲಿಸಿದ್ದರು. ಆದರೆ ಸಾಲಗಾರ ಕಿರುಕುಳ ನೀಡಿದ್ದಾರೆ ಎಂಬ ವಿಡಿಯೋ ಇದೆ ಎಂದು ಈಗ ತಿಳಿಸಿದ್ದು, ಈ ಬಗ್ಗೆ ತನಿಖೆ ನಡೆಸಲಾಗುವುದು ಎಂದು ಕಸಬಾಪೇಟ್ ಪೊಲೀಸ್ ಠಾಣೆಯ ಇನ್ಸಪೆಕ್ಟರ್ ತಿಳಿಸಿದ್ದಾರೆ.