ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಪಹಲ್ಗಾಮ್ನಲ್ಲಿ ನಡೆದ ಭಯೋತ್ಪಾದಕ ದಾಳಿಯ ಪ್ರತೀಕಾರವಾಗಿ ಭಾರತ ಆಪರೇಷನ್ ಸಿಂದೂರ್ ಮಿಲಿಟರಿ ಕಾರ್ಯಾಚರಣೆ ನಡೆಸಿತ್ತು. ಈ ಸೇನಾ ಕಾರ್ಯಾಚರಣೆಗೆ ಇಡೀ ದೇಶವೇ ಮೆಚ್ಚುಗೆ ವ್ಯಕ್ತಪಡಿಸಿದೆ.
ಆದ್ರೆ ಆಮ್ ಆದ್ಮಿ ಪಕ್ಷದ ನಾಯಕ ಹಾಗೂ ರಾಜ್ಯಸಭಾ ಸದಸ್ಯ ಸಂಜಯ್ ಸಿಂಗ್ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ಮೇಲೆ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಬಿಜೆಪಿಯ ಉದ್ದೇಶ ಮತ್ತು ಭಾರತೀಯ ಸಂಪ್ರದಾಯಗಳ ಮೇಲೆ ಅದರ ಪರಿಣಾಮಗಳನ್ನು ಪ್ರಶ್ನಿಸಿ, ಈ ಅಭಿಯಾನವನ್ನು ‘ಒಂದು ರಾಷ್ಟ್ರ, ಒಂದು ಪತಿ’ ಯೋಜನೆ ಎಂದು ಕರೆದಿದ್ದಾರೆ.
ಭಾರತೀಯ ಸಂಸ್ಕೃತಿಯಲ್ಲಿ, ಸಿಂದೂರವು ಮಹಿಳೆಯ ಪತಿಯ ದೀರ್ಘಾಯುಷ್ಯ ಮತ್ತು ಯೋಗಕ್ಷೇಮವನ್ನು ಸೂಚಿಸುತ್ತದೆ. ಇದು ಹೆಮ್ಮೆ ಮತ್ತು ಘನತೆಯ ಸಂಕೇತವಾಗಿದೆ. ಆದರೆ ಈಗ, ‘ಒಂದು ರಾಷ್ಟ್ರ, ಒಂದು ಚುನಾವಣೆ’ ಮತ್ತು ‘ಒಂದು ರಾಷ್ಟ್ರ, ಒಂದು ನಾಯಕ’ ಅನ್ನು ಪ್ರಚಾರ ಮಾಡಿದ ನಂತರ, ಪ್ರಧಾನಿ ‘ಒಂದು ರಾಷ್ಟ್ರ, ಒಂದು ಪತಿ’ ಅನ್ನು ಒತ್ತಾಯಿಸುತ್ತಿರುವಂತೆ ತೋರುತ್ತಿದೆ ಎಂದು ಅವರು ಟ್ವೀಟ್ ಮಾಡಿದ್ದಾರೆ.
ದೇಶದ ಎಲ್ಲಾ ಮಹಿಳೆಯರು ಪ್ರಧಾನಿ ನರೇಂದ್ರ ಮೋದಿಯವರನ್ನು ತಮ್ಮ ಪತಿ ಎಂದು ಸಾಂಕೇತಿಕವಾಗಿ ಸ್ವೀಕರಿಸಬೇಕೆಂದು ಬಿಜೆಪಿ ನಿರೀಕ್ಷಿಸುತ್ತದೆಯೇ ಎಂದು ಅವರು ಪ್ರಶ್ನಿಸಿದರು.
ಇದು ಕೇವಲ ಗಿಮಿಕ್ ಅಲ್ಲ, ಇದು ಮಹಿಳೆಯರಿಗೆ ಮಾಡಿದ ಅವಮಾನ. ಸಿಂದೂರ್ ಭಾವನಾತ್ಮಕ ಮಹತ್ವವನ್ನು ಹೊಂದಿದೆ. ಇದನ್ನು ರಾಜಕೀಯ ಲಾಭಕ್ಕಾಗಿ ದುರುಪಯೋಗಪಡಿಸಿಕೊಳ್ಳಬಾರದು ಎಂದು ಸಿಂಗ್ ಹೇಳಿದರು.
ಪಾಪಿಷ್ಠನ ದುರಾದೃಷ್ಟ ಎಲ್ಲಾ ಹಿರಿಯ ವಯಸ್ಕರೂ ಈತನನ್ನು ಸುಪುತ್ರನೆಂದು ಪರಿಗಣಿಸದೇ ಸುಪುತ್ರನೆಂದೇ ಭಾವಿಸುತ್ತಾರೆ.
ಇವನ ಬೌದ್ಧಿಕ ದಾರಿದ್ರ್ಯಕ್ಕೆ ಈತನ ಪೋಷಕರನ್ನೇಕೆ ದೂಷಿಸೋಣ.