ಹೊಸದಿಗಂತ ಡಿಜಿಟಲ್ ಡೆಸ್ಕ್:
2026 ರಲ್ಲಿ ಭಾರತ ಮತ್ತು ಶ್ರೀಲಂಕಾ ಜಂಟಿಯಾಗಿ ಆಯೋಜಿಸಲಿರುವ ಟಿ-20 ವಿಶ್ವಕಪ್ಗಾಗಿ ಭಾರತೀಯ ಕ್ರಿಕೆಟ್ ತಂಡ ತೀವ್ರ ಸಿದ್ಧತೆಯಲ್ಲಿ ತೊಡಗಿದೆ. 2024ರಲ್ಲಿ ಟಿ-20 ವಿಶ್ವಕಪ್ ವಿಜೇತರಾಗಿರುವ ಟೀಂ ಇಂಡಿಯಾ, ಮುಂದಿನ ಟೂರ್ನಮೆಂಟ್ನಲ್ಲಿ ತಮ್ಮ ಪಟ್ಟವನ್ನು ಉಳಿಸಿಕೊಳ್ಳುವ ಗುರಿಯನ್ನು ಹೊಂದಿದೆ. ಮೆನ್ ಇನ್ ಬ್ಲೂ ತಂಡವು ತಮ್ಮ ಪ್ರಶಸ್ತಿಯನ್ನು ಉಳಿಸಿಕೊಳ್ಳುವ ಗುರಿಯನ್ನು ಹೊಂದಿದ್ದು, ಸೂರ್ಯಕುಮಾರ್ ಯಾದವ್ ತಂಡದ ನಾಯಕತ್ವ ವಹಿಸುವುದು ಬಹುತೇಕ ಖಚಿತವಾಗಿದೆ.
ಯಶಸ್ವಿ ಜೈಸ್ವಾಲ್, ಶುಭಮನ್ ಗಿಲ್ ಮತ್ತು ಅಭಿಷೇಕ್ ಶರ್ಮಾ ಆರಂಭಿಕರಾಗಿ ಗಮನ ಸೆಳೆದಿದ್ದಾರೆ. ತಿಲಕ್ ವರ್ಮಾ, ಶ್ರೇಯಸ್ ಅಯ್ಯರ್ ಮಧ್ಯಮ ಕ್ರಮಾಂಕದಲ್ಲಿ ಉತ್ತಮ ಆಟ ಪ್ರದರ್ಶಿಸಿ ತಂಡದ ಆಯ್ಕೆ ಪಟ್ಟಿ ಸೇರಿದ್ದಾರೆ. ಅಯ್ಯರ್ ಟಿ-20 ಕ್ರಿಕೆಟ್ಗೆ ಮರಳಿದರೆ ನಾಯಕತ್ವಕ್ಕೂ ಸ್ಪರ್ಧೆ ನೀಡುವ ಸಾಧ್ಯತೆ ಇದೆ.
ವಿಕೆಟ್ ಕೀಪಿಂಗ್ ವಿಭಾಗದಲ್ಲಿ ಸಂಜು ಸ್ಯಾಮ್ಸನ್ ಭದ್ರ ಸ್ಥಾನ ಪಡೆದರೆ, ಜಿತೇಶ್ ಶರ್ಮಾ ಮತ್ತು ಜುರೆಲ್ ನಡುವೆಯೂ ಪೈಪೋಟಿ ತೀವ್ರವಾಗಿದೆ. ಕೆಎಲ್ ರಾಹುಲ್ ಆಯ್ಕೆ ಕಷ್ಟಕರವಾಗಿದೆ. ಆಲ್ರೌಂಡರ್ಗಳ ಪಟ್ಟಿಯಲ್ಲಿ ಹಾರ್ದಿಕ್ ಪಾಂಡ್ಯ ಹಾಗೂ ಅಕ್ಷರ್ ಪಟೇಲ್ ಪ್ರಮುಖರಾಗಿದ್ದಾರೆ.
ಬೌಲಿಂಗ್ ವಿಭಾಗದಲ್ಲಿ ಬುಮ್ರಾ ಮತ್ತು ಅರ್ಶದೀಪ್ ಪ್ರಮುಖ ವೇಗಿಗಳು. ಕುಲದೀಪ್ ಯಾದವ್ ಹಾಗೂ ವರುಣ್ ಚಕ್ರವರ್ತಿ ಸ್ಪಿನ್ನರ್ಗಳಾಗಿ ಮುಂದಿದ್ದಾರೆ. ಹರ್ಷಿತ್ ರಾಣಾ, ರಿಯಾನ್ ಪರಾಗ್ ಅಥವಾ ಶಿವಂ ದುಬೆ ಆಟಗಾರರಿಗಾದರೊಂದು ಸ್ಥಾನ ಸಿಗುವ ಸಾಧ್ಯತೆ ಇದೆ. ಸೂರ್ಯಕುಮಾರ್ ನೇತೃತ್ವದ ಭಾರತ ತಂಡ 2026ರ ಟಿ-20 ವಿಶ್ವಕಪ್ ಗೆಲ್ಲುವತ್ತ ಉತ್ಸಾಹದಿಂದ ಸಾಗುತ್ತಿದೆ.