ಕಾರ್‌-ಬೈಕ್‌ ನಡುವೆ ಮುಖಾಮುಖಿ ಡಿಕ್ಕಿ: ಸ್ಥಳದಲ್ಲೇ ಬೈಕ್‌ ಸವಾರ ಸಾವು

ಹೊಸದಿಗಂತ ವರದಿ ವಿಜಯಪುರ:

ಕಾರ್- ಬೈಕ್ ಮುಖಾಮುಖಿ ಡಿಕ್ಕಿಯಾಗಿ ಬೈಕ್ ಸವಾರ ಸ್ಥಳದಲ್ಲೆ ಸಾವಿಗೀಡಾದ ಘಟನೆ ಜಿಲ್ಲೆಯ ಬಸವನಬಾಗೇವಾಡಿ ಪಟ್ಟಣದ ಹೊರವಲಯದಲ್ಲಿ ನಡೆದಿದೆ.

ಮೃತಪಟ್ಟವನನ್ನು ಬಳ್ಳಾವುರ ಗ್ರಾಮದ ಸಂತೋಷ ಶಿವಯ್ಯ ಗುರುವಿನ್ (29) ಎಂದು ಗುರುತಿಸಲಾಗಿದೆ.

ಸಂತೋಷ ತನ್ನ ಸಹೋದರ ಆಕಾಶ ಶಿವಯ್ಯ ಗುರುವಿ‌ನ ಈತನೊಂದಿಗೆ ಬಸವನ ಬಾಗೇವಾಡಿಯಿಂದ ಬಳ್ಳಾವುರ ಗ್ರಾಮಕ್ಕೆ ತೆರಳುವ ಸಂದರ್ಭದಲ್ಲಿ ಇಂಗಳೇಶ್ವರ ಮಧ್ಯದಲ್ಲಿ ಈ ಅಪಘಾತ ಸಂಭವಿಸಿದ್ದು, ಆಕಾಶ ಗುರುವಿ‌ನ, ಕಾರ್ ಚಾಲಕ ಲಕ್ಕಪ್ಪ ವಿಠೋಬಾ ಗಂಗೂರ, ವಿನಾಯಕ ರಾಘವೇಂದ್ರ ಪತ್ತಾರ ಗಾಯಗೊಂಡಿದ್ದು, ಚಿಕಿತ್ಸೆಗಾಗಿ ಅಸ್ಪತ್ರೆಗೆ ದಾಖಲಿಸಲಾಗಿದೆ.

ಬಸವನಬಾಗೇವಾಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!