ಹೊಸದಿಗಂತ ಡಿಜಿಟಲ್ ಡೆಸ್ಕ್:
ಖ್ಯಾತ ಪರಿಸರವಾದಿ ಸಾಲುಮರದ ತಿಮ್ಮಕ್ಕನ ಅದ್ಭುತ ಜೀವನವನ್ನು ಆಧಾರವಾಗಿಟ್ಟುಕೊಂಡು ಹೊಸ ಕನ್ನಡ ಸಿನಿಮಾವೊಂದು ತಯಾರಾಗುತ್ತಿದೆ. ಈ ಚಿತ್ರವು ತಿಮ್ಮಕ್ಕ ಅವರ ಪರಿಸರ ಪ್ರೇಮ, ಬದ್ಧತೆಯೊಂದಿಗೆ ಹಸಿರು ಸಂಸ್ಕೃತಿಯ ಪಾಠವನ್ನು ಸಿನಿಮಾ ಮೂಲಕ ತಲುಪಿಸಲು ಯತ್ನಿಸುತ್ತಿದೆ. ಇದೀಗ ಚಿತ್ರದ ಮೊದಲ ಹಂತದ ಚಿತ್ರೀಕರಣ ಮುಕ್ತಾಯವಾಗಿದೆ ಎಂಬ ಮಾಹಿತಿ ಹೊರಬಿದ್ದಿದೆ.
ವೃಕ್ಷಮಾತೆ ಎಂಬ ಚಿತ್ರದ ಶೀರ್ಷಿಕೆಯನ್ನು ಹಿರಿಯ ಲೇಖಕಿ ನಾಗಲಕ್ಷ್ಮಿ ಬಾಯಿ ಅವರು ಅಧಿಕೃತವಾಗಿ ಬಿಡುಗಡೆ ಮಾಡಿದ್ದಾರೆ.
ನಟಿ ಸೌಜನ್ಯ, ತಿಮ್ಮಕ್ಕನ ಪಾತ್ರದಲ್ಲಿ ನಟಿಸುತ್ತಿದ್ದು, ನೀನಾಸಂ ಅಶ್ವಥ್ ಅವರು ತಿಮ್ಮಕ್ಕನ ಪತಿಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ತಮಕುರು ಜಿಲ್ಲೆಯ ಮಧುಗಿರಿ ಹಾಗೂ ಹುಲಿಕಲ್ನಲ್ಲಿ ಈ ಮೊದಲ ಹಂತದ ಶೂಟಿಂಗ್ ನಡೆದಿದೆ. ನಿರ್ದೇಶಕ ಒರಟ ಶ್ರೀ ಈಗ ಎರಡನೇ ಹಂತದ ಚಿತ್ರೀಕರಣಕ್ಕಾಗಿ ಸಿದ್ಧತೆ ನಡೆಸುತ್ತಿದ್ದಾರೆ.
ಚಿತ್ರದ ಛಾಯಾಗ್ರಹಣ ನಾಗರಾಜ್ ಅವರದ್ದು, ಸಂಗೀತ ಶ್ಯಾಮ್ ಅವರದ್ದು. ಒರಟ ಶ್ರೀ ಮತ್ತು ನೆಲ್ಲಿಕಟ್ಟೆ ಸಿದ್ದೇಶ್ ಸಂಭಾಷಣೆ ಬರೆದಿದ್ದು, ಹಿರಿಯ ನಟ ಎಂ.ಕೆ.ಮಠ, ಭೂಮಿಕಾ, ಪ್ರಕಾಶ್ ಶೆಟ್ಟಿ ಮೊದಲಾದವರು ಪ್ರಮುಖ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ.