ದಿನಭವಿಷ್ಯ: ಪ್ರಮುಖ ಕಾರ್ಯ ಈಡೇರುತ್ತದೆ, ನೆಗೆಟಿವ್‌ ಚಿಂತನೆ ಮನಸ್ಸಿನಿಂದ ತೊಲಗುತ್ತದೆ!

ಮೇಷ
ನಿಮ್ಮ ಆತ್ಮೀಯ ವ್ಯಕ್ತಿಗಳು ನಿಮ್ಮನ್ನು ಅಸಡ್ಡೆ ಮಾಡುತ್ತಿರುವ ಕೊರಗು ಕಾಡಬಹುದು. ಅಂತಹ ಶಂಕೆಗೆ ಎಡೆಯಿಲ್ಲ. ಎಲ್ಲರಲ್ಲಿ ವಿಶ್ವಾಸವಿರಲಿ.
ವೃಷಭ
ನಿಮ್ಮ ಖಾಸಗಿ ಬದುಕಿನಲ್ಲಿ ಏರುಪೇರು ಉಂಟಾದೀತು. ನೀವು ಬಯಸದ ಬೆಳವಣಿಗೆ ಸಂಭವ. ಸ್ಥಿತಪ್ರಜ್ಞತೆ ಮುಖ್ಯ.  ಧನಹಾನಿ.
ಮಿಥುನ
ಇತ್ತೀಚಿನ ಕೆಲವು ಬೆಳವಣಿಗೆ ನಿಮ್ಮ ಆಶಾವಾದ ಹೆಚ್ಚಿಸಲಿದೆ.   ಉತ್ಸಾಹ ತುಂಬಲಿದೆ. ವಿರೋಧ ಕೊನೆ ಕಾಣಲಿದೆ.
ಕಟಕ
ನಿಮಗಿಂದು ಅಶಾಂತ ಮನಸ್ಥಿತಿ. ನೀವು ಬಯಸಿದ ಬೆಳವಣಿಗೆ ಆಗದಿರುವುದು ಅದಕ್ಕೆ ಕಾರಣ.  ಒತ್ತಡದ ಕಾರ್ಯ ಬದಿಗಿಡಿ. ನಿರಾಳವಾಗಿರಲು ಯತ್ನಿಸಿ.
ಸಿಂಹ
ಸಮಸ್ಯೆಯಿಂದ ಮುಕ್ತಿ. ಚಿಂತೆ ಪರಿಹಾರ. ಕೆಲದಿನಗಳ ಬಳಿಕ ಮುಖದಲ್ಲಿ ನಗು ಮೂಡಲಿದೆ. ಬಂಧು ಸಹಕಾರ.  ಕನ್ಯಾ
ಆದ್ಯತೆಯ ಕೆಲಸ ಮೊದಲು ಮುಗಿಸಿ. ಪ್ರೀತಿ, ಕುಟುಂಬ, ಕೆಲಸದ ಮಧ್ಯೆ ಸಮನ್ವಯ ಸಾಧಿಸಿರಿ. ಮಾನಸಿಕ ಕ್ಲೇಶ ಕಳೆಯಲಿದೆ.
ತುಲಾ
ಸಮಸ್ಯೆಯೊಂದಕ್ಕೆ  ಪರಿಹಾರ ಕಂಡುಕೊಂಡ ನಿರಾಳತೆ. ಆಪ್ತರಿಂದ ಸಹಕಾರ. ಬಂಧು ಭೇಟಿ. ವ್ಯವಹಾರ ಸುಗಮ, ಆರ್ಥಿಕ ಉನ್ನತಿ.
ವೃಶ್ಚಿಕ
ಭಾವುಕರಾಗಿ ವರ್ತಿಸುವ ಪ್ರಸಂಗ ಒದಗಬಹುದು. ನಿಮ್ಮ ದೌರ್ಬಲ್ಯ ಪ್ರದರ್ಶಿಸಬೇಡಿ. ಆಪ್ತರ ಜತೆಗೆ ಜಗಳವಾಡದಿರಿ.
ಧನು
ಮನಸ್ಸಿನಲ್ಲಿ ನಿರಾಶೆ, ಅಸಂತೋಷ. ಅದಕ್ಕೆ ಕೆಲವು ಕಾರಣವಿದ್ದೀತು.
ಸಮಸ್ಯೆಯನ್ನು ಪರಿಹರಿಸಲು ನೋಡಿ.ಕೊರಗುತ್ತಾ ಕೂರಬೇಡಿ.
ಮಕರ
ಪ್ರಮುಖ ಕಾರ್ಯ ಈಡೇರುತ್ತದೆ. ನೆಗೆಟಿವ್ ಚಿಂತನೆ ಮನಸ್ಸಿನಿಂದ ತೊಲಗುತ್ತದೆ. ಹಾಗಾಗಿ ನಿರಾಳ. ಕೆಲಸದ ಒತ್ತಡ ದಿಂದಲೂ ನಿಮಗೆ ಮುಕ್ತಿ.
ಕುಂಭ
ಮನದಲ್ಲಿ ಏನೋ ಕೊರಗು. ನೀವು ಬಯಸಿದ ಬೆಳವಣಿಗೆ ಆಗಿಲ್ಲವೆಂಬ ನಿರಾಶೆ.  ಧೈರ್ಯ ಹೆಚ್ಚಿಸಿಕೊಳ್ಳಿ. ಬಂಧುಗಳಿಂದ ಸಹಕಾರ.
 ಮೀನ
ಈ ದಿನ ನಿರುತ್ಸಾಹ ಕಾಡಲಿದೆ. ಆರೋಗ್ಯದ ಚಿಂತೆ. ಕೆಲಸವೊಂದು ಇನ್ನೂ ಪೂರೈಸದ ಹತಾಶೆ. ಬಂಧುಗಳಿಂದ ಟೀಕೆ. ಸಂಯಮ ವಹಿಸಿ.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!