ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತದ ಮಾಜಿ ಪ್ರಧಾನಿ, ಕರ್ನಾಟಕದ ಪ್ರಖ್ಯಾತ ರಾಜಕಾರಣಿ ಹೆಚ್.ಡಿ. ದೇವೇಗೌಡರಿಗೆ ಅವರ ಶ್ರೇಷ್ಠ ಸಾರ್ವಜನಿಕ ಸೇವೆ ಮತ್ತು ರಾಷ್ಟ್ರದ ರಾಜಕೀಯ ಕ್ಷೇತ್ರದಲ್ಲಿ ಅತ್ಯುತ್ತಮ ಕೊಡುಗೆಗಾಗಿ ‘ಗಂಗಾ ಸಾಮ್ರಾಟ್ ಶ್ರೀಪುರುಷ’ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಬೆಂಗಳೂರಿನ ಬಾಬು ಜಗಜೀವನ್ ರಾಮ್ ಭವನದಲ್ಲಿ ನಡೆದ ಅಭಿನಂದನಾ ಸಮಾರಂಭದಲ್ಲಿ ಈ ಪ್ರಶಸ್ತಿ ಪ್ರಧಾನ ಮಾಡಲಾಯಿತು. ಈ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಎಚ್.ಡಿ ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ ಸದಾನಂದ ಗೌಡ, ಪರಿಷತ್ ಸದಸ್ಯ ಎ. ದೇವೇಗೌಡ, ಶ್ರೀ ನಿರ್ಮಲಾನಂದ ಸ್ವಾಮೀಜಿ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
ಇಡೀ ದೇಶಗುರುತಿಸಿರುವ ದೇವೇಗೌಡ ಅವರು, ದಕ್ಷಿಣ ಭಾರತದ ಮೊದಲ ಪ್ರಧಾನಿಯಾಗಿ ಭಾರತವನ್ನು ಪ್ರತಿನಿಧಿಸಿದರು. ರೈತ ಕುಟುಂಬದಿಂದ ಹೊರಟ ಅವರು ಪ್ರಧಾನಿಯಾಗಿ, ಹಾಗೂ ಮುಖ್ಯಮಂತ್ರಿ ಪದವಿಯಲ್ಲಿ ರಾಜ್ಯದ ಅಭಿವೃದ್ಧಿಗೆ ಶ್ರಮಿಸಿದವರು. ಪ್ರಶಸ್ತಿ ಸ್ವೀಕರಿಸಿದ ಬಳಿಕ ದೇವೇಗೌಡ ಅವರು ಭಾವುಕ ಭಾಷಣವನ್ನಾಡಿ, ತಮ್ಮ ಪತ್ನಿ ಚೆನ್ನಮ್ಮರ ಕೊಡುಗೆಯನ್ನು ಪ್ರಸ್ತಾಪಿಸಿ, “ಅವರು ನನ್ನ ಬೆಳವಣಿಗೆಗೆ ಶಕ್ತಿ ತುಂಬಿದ್ದಾರೆ,” ಎಂದರು. 65 ವರ್ಷಗಳ ರಾಜಕೀಯ ಯಾನದಲ್ಲಿ ಜನರ ಸಹಕಾರದಿಂದ ಪ್ರಧಾನಿಯ ಪದವಿಗೆ ಏರಿದಂತ ಸಂಗತಿಯನ್ನು ಸ್ಮರಿಸಿದರು.
ಅಂತೆಯೇ, ಪ್ರಧಾನಿ ಮೋದಿ ಬಗ್ಗೆ ಮಾತನಾಡಿದ ಅವರು, ಪ್ರಧಾನಿಗೆ ಜನರ ಸಂಕಷ್ಟ ತಡೆಯುವ ಶಕ್ತಿ ಇದೆ ಎಂದರು. ಸೋಲು-ಗೆಲುವುಗಳು ರಾಜಕೀಯದಲ್ಲಿ ಸಹಜವಾದರೂ ಜನರ ನಂಬಿಕೆ ಮಾತ್ರ ಶಾಶ್ವತ. ತಮ್ಮ ಜೀವನದ ಕೊನೆಯ ಹಂತದಲ್ಲಿ ಈ ರೀತಿಯ ಗೌರವ ಸಿಕ್ಕಿದ್ದು ಆತ್ಮಕ್ಕೆ ಸಮಾಧಾನ ತಂದಿದೆ ಎಂದರು.
ಎಲ್ಲ ಸ್ವಾರ್ಥ ಮತ್ತು ಯಾರನ್ನು ಬೆಳೆಯೋಕೆ ಬಿಡದೇ ಮಕ್ಕಳು ಮೊಮ್ಮಕ್ಕಳು ಮುಂದುವರಿಯಲು ಬುನಾದಿ ಹಾಕಿ ಬೇರೆ ಯವರ ಭವಿಷ್ಯ ಹಾಳು ಮಾಡಿದ ಕೀರ್ತಿ ಸಲ್ಲುತ್ತದೆ