ಹೊಸದಿಗಂತ ವರದಿ ವಿಜಯಪುರ:
ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಕೆಳಗಿಳಿಸೋಕೆ ಭಾರೀ ಸಂಚು ನಡೆದಿದೆ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಹೇಳಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯನವರನ್ನು ಅಪಮಾನ ಮಾಡಿ, ಮಾನಸಿಕವಾಗಿ ಗೊಂದಲಕ್ಕೀಡು ಮಾಡಿ ರಾಜೀನಾಮೆ ನೀಡುವಂತೆ ಒತ್ತಾಯ ಮಾಡುತ್ತಿದ್ದಾರೆ ಎಂದರು.
ಅವರದ್ದೇ ಪಕ್ಷ ಕಾಂಗ್ರೆಸ್ ನಲ್ಲೇ ಸಿಎಂ ಸಿದ್ದರಾಮಯ್ಯಗೆ ಟೀಕೆ ಮಾಡುವುದು ಹೆಚ್ಚಿದೆ ಎಂದರು.
ಇನ್ನು ಯಡಿಯೂರಪ್ಪ ನನ್ನ ಮಗನನ್ನು ರಾಜ್ಯಾಧ್ಯಕ್ಷ ಸ್ಥಾನದಿಂದ ಕೆಳಗಿಳಿಸಿದರೆ ನಾನು ಸಾಯುತ್ತೇನೆ, ಜೀವಂತ ಇರಲ್ಲಾ ಎನ್ನುತ್ತಾರೆ. ರಾಜ್ಯದಲ್ಲಿ ವಿರೋಧ ಪಕ್ಷ ಸತ್ತು ಹೋಗಿದೆ. ಇಷ್ಟೆಲ್ಲಾ ಹಗರಣಗಳು ಆದರೂ ಬಿಜೆಪಿ ಧ್ವನಿ ಇಲ್ಲವಾಗಿದೆ ಎಂದು ದೂರಿದರು.