ಹೊಸ ದಿಗಂತ ವರದಿ,ಸಿದ್ದಾಪುರ:
ಗಾಳಿ-ಮಳೆಯಿಂದಾಗಿ ತಾಲೂಕಿನ ಗೊಳಿಮಕ್ಕಿ -ಹೇರೂರು-ಶಿರಸಿ ರಸ್ತೆಯ ಕಾರಗುಳಿಯಲ್ಲಿ ಗುಡ್ಡಕುಸಿದು ರಸ್ತೆಯ ಮೇಲೆ ಭಾರೀ ಗಾತ್ರದ ಕಲ್ಲಿನ ಬಂಡೆ ಬಂದು ಬಿದ್ದು ಸಂಚಾರ ಸ್ಥಗಿತಗೊಂಡಿತ್ತು.
ಕುಸಿದ ಗುಡ್ಡದ ಮಣ್ಣನ್ನು ಹಾಗೂ ರಸ್ತೆಯ ನಡುವೆ ಬಿದ್ದ ಭಾರೀ ಗಾತ್ರದ ಕಲ್ಲಿನ ಬಂಡೆಯನ್ನು ರಸ್ತೆ ನಿರ್ವಹಣೆ ಮಾಡುತ್ತಿರುವ ಲೋಕೋಪಯೋಗಿ ಇಲಾಖೆ ತೆರವುಗೊಳಿಸಿ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟಿದೆ. ಹಲವು ಗಂಟೆಗಳ ಕಾಲ ಸಂಚಾರ ಸ್ಥಗಿತಗೊಂಡಿದ್ದರಿಂದ ಶಿರಸಿ, ಸಿದ್ದಾಪುರಕ್ಕೆ ತೆರಳುವವರು ಹಾಗೂ ಶಾಲಾ ವಿದ್ಯಾರ್ಥಿಗಳು ಪರದಾಡುವಂತಾಯಿತು.