ಹೊಸ ದಿಗಂತ ಡಿಜಿಟಲ್ ಡೆಸ್ಕ್:
ನಾನು ಆಪರೇಷನ್ ಸಿಂದೂರದಲ್ಲಿ ಭಾಗಿಯಾಗಿದ್ದ ಮಾತ್ರಕ್ಕೆ ಪತ್ನಿಯ ಮೇಲೆ ದೌರ್ಜನ್ಯ ಎಸಗಿದ್ದಕ್ಕೆ ವಿನಾಯ್ತಿ ಕೊಡಲು ಸಾಧ್ಯವಿಲ್ಲ ಎಂದು ಪತ್ನಿಯ ಕೊಲೆ ಆರೋಪಿಯಾಗಿರುವ ಬ್ಲ್ಯಾಕ್ ಕಮಾಂಡೋಗೆ ಸುಪ್ರೀಂಕೋರ್ಟ್ ಚಾಟಿ ಬೀಸಿದೆ .
ಪ್ರಕರಣದಲ್ಲಿ ಪೊಲೀಸರ ಮುಂದೆ ಸರೆಂಡರ್ ಆಗಲು ವಿನಾಯ್ತಿ ಕೋರಿದ್ದ ಕಮಾಂಡೋ ತಾನು `ಆಪರೇಷನ್ ಸಿಂದೂರ’ದಲ್ಲಿ ಭಾಗಿಯಾಗಿದ್ದವನು. ನಾನು ಬ್ಲ್ಯಾಕ್ ಕ್ಯಾಟ್ ಕಮಾಂಡೋ ಎಂದು ಹೇಳಿದ್ದಾರೆ. ಇದಕ್ಕೆ ಕಠಿಣವಾಗಿಯೇ ಪ್ರತಿಕ್ರಿಯಿಸಿದ ಕೋರ್ಟ್, ಹಾಗಂತ ನಿಮಗೆ ವಿನಾಯ್ತಿ ಕೊಡೋಕೆ ಆಗಲ್ಲ ಅಂದಿದೆ. ಅಲ್ಲದೆ, ದೈಹಿಕವಾಗಿ ನೀವೆಷ್ಟು ಶಕ್ತರಾಗಿದ್ದೀರಿ. ನಿಮ್ಮ ಪತ್ನಿಯನ್ನು ಕತ್ತು ಹಿಸುಕಿದ್ದೀರಲ್ಲ. ಇದೊಂದು ಭೀಕರ ಕೃತ್ಯ. ಇಂಥ ಕೇಸ್ನಲ್ಲಿ ವಿನಾಯ್ತಿ ಕೊಡೋಕೆ ಆಗಲ್ಲ ಎಂದು ಜಸ್ಟೀಸ್ ಉಜ್ಜಲ್ ಭುಯಾನ್ ಹೇಳಿದರು. ವಾದದ ಬಳಿಕ ಶರಣಾಗತಿಗೆ ಸುಪ್ರೀಂಕೋರ್ಟ್ 2 ವಾರಗಳ ಕಾಲಾವಕಾಶ ನೀಡಿದೆ.
ಪತ್ನಿಯನ್ನು ಕತ್ತು ಹಿಸುಕಿ ಕೊಂದ ಪ್ರಕರಣದಲ್ಲಿ ಜುಲೈ 2004ರಂದು ಅಮೃತಸರದ ವಿಚಾರಣಾ ನ್ಯಾಯಾಲಯವು ಅರ್ಜಿದಾರ ಬಲ್ಜಿಂದರ್ ಸಿಂಗ್ ಅವರನ್ನು ಐಪಿಸಿ ಸೆಕ್ಷನ್ 304-ಬಿ ಅಡಿಯಲ್ಲಿ ದೋಷಿ ಎಂದು ತೀರ್ಪು ನೀಡಿತ್ತು.