ರಾಜ್ಯ ಸರಕಾರದಿಂದ ಕಲಾವಿದರಿಗೆ ಸಿಹಿ ಸುದ್ದಿ: ಮಾಸಾಶನ ಹೆಚ್ಚಿಸಿ ಅನುದಾನ ಬಿಡುಗಡೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಾಜ್ಯ ಸರಕಾರ ಕಲಾವಿದರ ಮಾಸಾಶನ ಹೆಚ್ಚಿಸಿ ಅನುದಾನ ಬಿಡುಗಡೆ ಮಾಡಿದೆ. ಈ ಹಿಂದೆ ಕಲಾವಿದರ ಮಾಸಾಶನ 2000 ರೂಪಾಯಿಗಳಿದ್ದು, ಅದನ್ನು ಹೆಚ್ಚಿಸಿ 2500 ಮಾಡಲಾಗಿದ್ದು, ಇದಕ್ಕಾಗಿ 32.94 ಕೋಟಿ ಹಣವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬಿಡುಗಡೆ ಮಾಡಿದೆ.

ಕಳೆದ ವರ್ಷ ನಾಟಕ ಅಕಾಡೆಮಿಯ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ್ದ ಸಿಎಂ ಸಿದ್ದರಾಮಯ್ಯ ಅವರು ಕಲಾವಿದರ ಮಾಸಾಶನವನ್ನು ಎರಡು ಸಾವಿರದಿಂದ ಮೂರು ಸಾವಿರಕ್ಕೆ ಏರಿಕೆ ಮಾಡುವುದಾಗಿ ಭರವಸೆ ನೀಡಿದ್ದರು. ಆದರೆ 2500 ರೂಪಾಯಿ ಏರಿಕೆ ಮಾಡಲಾಗಿದೆ. ಅಸಲಿಗೆ ಕಲಾವಿದರಿಗೆ ತಿಂಗಳ ಮಾಸಾಶನವಾಗಿ ಐದು ಸಾವಿರ ರೂಪಾಯಿ ನೀಡಬೇಕು ಎಂಬುದು ಸಂಘದ ಬೇಡಿಕೆ ಆಗಿತ್ತು. ಈಗ 500 ರೂಪಾಯಿಗಳನ್ನು ಮಾತ್ರವೇ ಏರಿಕೆ ಮಾಡಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!