ಹೊಸದಿಗಂತ ವರದಿ, ಯಲ್ಲಾಪುರ:
ವಿದ್ಯುತ ಅವಘಡದಿಂದ ವ್ಯಕ್ತಿಯೊಬ್ಬ ಮೃತ ಪಟ್ಟ ಘಟನೆ ತಾಲೂಕಿನ ಮಂಚಿಕೇರಿ ಹಾಸಣಗಿ ಸಮೀಪದ ಅಣಲೇಸರ ಬಳಿ ಮಂಗಳವಾರ ಸಂಜೆ ನಡೆದಿದೆ.
ಆನಂದ ಸೋಮಾ ಸಿದ್ದಿ (೨೫) ಜಡಗಿನಕೊಪ್ಪ ಬಿಳಕಿ ಅವಘಡದಲ್ಲಿ ಮೃತಪಟ್ಟವನಾಗಿದ್ದಾನೆ.
ಈತನನ್ನು ಹೆಸ್ಕಾಂ ಅಧಿಕಾರಿ ಮತ್ತು ಲೈನ್ ಮನ್ ವಿದ್ಯುತ್ ದುರಸ್ತಿಗೆ ಏಣಿ ಮೂಲಕ ಕಂಬ ಹತ್ತಿಸಿದ್ದರು. ವಿದ್ಯುತ್ ಸ್ಪರ್ಶವಾಗಿ ಏಣಿಯಿಂದ ಕೆಳಗೆ ಬಿದ್ದು ಮೃತಪಟ್ಟಿದ್ದಾರೆ. ಯಾವುದೇ ಸರಿಯಾದ ಸುರಕ್ಷತಾ ಪರಿಕರಗಳನ್ನು ಬಳಸದೇ ವಿದ್ಯುತ್ ಕಂಬದ ಮೇಲೆ ಈತನನ್ನು ಹತ್ತಿಸಿದ ಆರೋಪದ ಮೇಲೆ ಲೈನ್ ಮನ್ ಸುನೀಲ್ ಚೌಹಾಣ್ ಮತ್ತು ಸೆಕ್ಷನ್ ಅಧಿಕಾರಿ ನಾಗರಾಜ ಆಚಾರಿ ಮೇಲೆ ಪೋಲಿಸರು ಪ್ರಕರಣ ದಾಖಲಿಸಿದ್ದಾರೆ.
ಸುರಕ್ಷತಾ ಉಪಕರಣ ನೀಡದೇ ನಿರ್ಲಕ್ಷ್ಯತನವನ್ನು ಲೈನಮನ್ ಹಾಗೂ ಸೆಕ್ಷನ್ ಅಧಿಕಾರಿ ತೋರಿದ್ದಾರೆ ಎಂದು ಮೃತನ ಕುಟುಂಬದವರಾದ ಯೋನಾತನ ಸಿದ್ದಿ ಪೋಲಿಸರಿಗೆ ದೂರು ನೀಡಿದ್ದಾರೆ.