ಯಮ ಸ್ವರೂಪಿಯಾದ ಮಳೆರಾಯ! ಭೀಮಾ ನದಿ ಪ್ರವಾಹಕ್ಕೆ ಇಬ್ಬರು ಯುವಕರು ಬಲಿ

ಹೊಸದಿಗಂತ ವಡಗೇರಾ:

ಮಹಾರಾಷ್ಟ್ರದ ಪಶ್ಚಿಮ ಘಟ್ಟಗಳಲ್ಲಿ ಬಾರಿ ಮಳೆ ಹಿನ್ನೆಲೆ ತಾಲೂಕಿನ ಮಾಚನೂರು ಗ್ರಾಮದ ಭೀಮಾನದಿ ಪ್ರವಾಹಕ್ಕೆ ಇಬ್ಬರು ಯುವಕರು ಬಲಿಯಾಗಿದ್ದಾರೆ. ಭೀಮಾನದಿಯಲ್ಲಿ ಕೊಚ್ಚಿ ಹೋದ ದನಗಾಯಿ ಯುವಕರು ದನಕ್ಕೆ ನೀರು ಕುಡಿಸಲು ಬಂದು ನದಿ ಪಾಲು ಆಗಿರುವ ಘಟನೆ ಯಾದಗಿರಿ ಜಿಲ್ಲೆಯ ವಡಗೇರಾ ತಾಲ್ಲೂಕಿನ ಮಾಚನೂರ ಗ್ರಾಮದಲ್ಲಿ ನಡೆದಿದೆ.

ಗ್ರಾಮದ ಹೊರವಲಯದಲ್ಲಿನ ಭೀಮಾನದಿಯಲ್ಲಿ ಕೊಚ್ಚಿ ಹೋದ ದನಗಾಯಿಗಳು ರಮೇಶ್ (17) ಸಿದ್ದಪ್ಪ (21)ಗುರುಸಣಗಿ ಎಂದು ಗುರುತಿಸಲಾಗಿದೆ.

ಬ್ರಿಡ್ಜ್ ಕಂ ಬ್ಯಾರೇಜ್ ನಿಂದ ಅಪಾರ ಪ್ರಮಾಣದ ನೀರು ಬಿಡುಗಡೆಯಾಗಿ ಅಪಾಯದ ಮಟ್ಟ ಮೀರಿ ಭೀಮಾನದಿ ಹರಿಯುತ್ತಿದೆ. ಮೃತ ಯುವಕರ ಶವಕ್ಕಾಗಿ ಅಗ್ನಿಶಾಮಕ, ಪೊಲೀಸ್ ಸಿಬ್ಬಂದಿಗಳಿಂದ ಶೋಧ ಕಾರ್ಯ ನಡೆಯುತ್ತಿದೆ. ಇತ್ತ ಸ್ಥಳದಲ್ಲಿ ಮೃತರ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

ಘಟನಾ ಸ್ಥಳಕ್ಕೆ ವಡಗೇರಾ ತಹಸೀಲ್ದಾರ್ ಶ್ರೀಮತಿ ಮಂಗಳಾ. ಎಂ ಭೇಟಿ ನೀಡಿ ಮೃತರ ಕುಟುಂಬಕ್ಕೆ ಸಾಂತ್ವನ ತಿಳಿಸಿ ಮಾತನಾಡಿದವರು ಭೀಮಾ ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಾಗಿದ್ದು ಮತ್ತು ಮೊಸಳೆಗಳ ಕಾಟದಿಂದ ಶವಗಳ ಹುಡುಕಾಟಕ್ಕೆ ತೊಡಕಾಗುತ್ತಿದೆ ಆದರೂ ಕೂಡಾ ನಾಳೆ ಮತ್ತಷ್ಟು ಸಿಬ್ಬಂದಿಗಳನ್ನು ಮತ್ತು ನುರಿತ ಈಜುಗಾರರನ್ನು ಕರೆಸಿ ಶವಗಳ ಹುಡುಕುವಲ್ಲಿ ಪ್ರಯತ್ನಿಸುವುದಾಗಿ ಅವರು ತಿಳಿಸಿದರು.

ಈ ಸಂದರ್ಭದಲ್ಲಿ ಪಿಎಸ್ಐ ಮೈಬೂಬ ಅಲಿ, ಕಂದಾಯ ನಿರೀಕ್ಷಕ ಬಸವರಾಜ, ಪೊಲೀಸ್ ಹಾಗೂ ಅಗ್ನಿಶಾಮಕದಳ ಕಂದಾಯ ಇಲಾಖೆ ಸಿಬ್ಬಂದಿಗಳು ಇನ್ನಿತರರು ಇದ್ದರು.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!