ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತ ಮತ್ತು ಇಂಗ್ಲೆಂಡ್ ನಡುವೆ ನಡೆಯುತ್ತಿರುವ ಐದು ಪಂದ್ಯಗಳ ಟೆಸ್ಟ್ ಸರಣಿಯು ಹೆಚ್ಚು ಕುತೂಹಲ ಮೂಡಿಸಿದೆ. ಮೊದಲ ಪಂದ್ಯದಲ್ಲಿ ಟೀಂ ಇಂಡಿಯಾ ಇಂಗ್ಲೆಂಡ್ ಎದುರು 5 ವಿಕೆಟ್ಗಳ ಸೋಲು ಕಂಡಿದ್ದು, ಇದೀಗ ಎರಡನೇ ಟೆಸ್ಟ್ಗೆ ಸಿದ್ಧತೆ ನಡೆಯುತ್ತಿದೆ. ಈ ಪಂದ್ಯ ಜುಲೈ 2ರಿಂದ ಎಡ್ಜ್ಬಾಸ್ಟನ್ನಲ್ಲಿ ಆರಂಭವಾಗಲಿದೆ.
ಪೂರ್ವಾನುಮಾನಗಳ ಪ್ರಕಾರ, ವೇಗಿ ಜಸ್ಪ್ರೀತ್ ಬುಮ್ರಾ ಅವರಿಗೆ ಕೆಲಸದ ಒತ್ತಡ ನಿರ್ವಹಣೆಯ ನಿಟ್ಟಿನಲ್ಲಿ ವಿಶ್ರಾಂತಿ ನೀಡುವ ಸಾಧ್ಯತೆ ಇದೆ. ಇದು ಸಂಭವಿಸಿದರೆ, ಟೀಂ ಇಂಡಿಯಾದ ಬೌಲಿಂಗ್ ಘಟಕದ ಬಲ ಗಂಭೀರವಾಗಿ ಕಡಿಮೆಯಾಗಬಹುದು. ಮೊದಲ ಟೆಸ್ಟ್ನ ಎರಡನೇ ಇನ್ನಿಂಗ್ಸ್ನಲ್ಲಿ ವೇಗಿಗಳು ಯಾವುದೇ ಪ್ರಭಾವ ಬೀರುವಲ್ಲಿ ವಿಫಲರಾಗಿದ್ದರು.
ಬುಮ್ರಾ ಲಭ್ಯವಿಲ್ಲದಿದ್ದರೆ, ಬದಲಿಯಾಗಿ ಅರ್ಶ್ದೀಪ್ ಸಿಂಗ್ ಅವರನ್ನು ಆಯ್ಕೆ ಮಾಡಬೇಕೆಂಬ ಒತ್ತಾಯ ಅಭಿಮಾನಿಗಳಲ್ಲಿ ಹೆಚ್ಚಾಗಿದೆ. ಎಡಗೈ ವೇಗಿಯಾಗಿರುವ ಅವರು ಇಂಗ್ಲೆಂಡ್ ಪಿಚ್ಗಳ ಮೇಲೆ ಪರಿಣಾಮಕಾರಿ ಪ್ರದರ್ಶನ ನೀಡುವ ಸಾಮರ್ಥ್ಯ ಹೊಂದಿದ್ದಾರೆ. ‘ಅವರಿಗೆ ಈಗ ಅವಕಾಶ ನೀಡದೇ ಇಟ್ಟರೆ, ನಂತರ ಯಾವಾಗ?’ ಎಂಬ ಅಭಿಮಾನಿಗಳ ಪ್ರಶ್ನೆ ಮನ್ನಣೆ ಗಳಿಸಿದೆ.
ಸಿರಾಜ್, ಪ್ರಸಿದ್ಧ್ ಮತ್ತು ಬುಮ್ರಾ ಎಲ್ಲರೂ ಬಲಗೈ ಬೌಲರ್ಗಳು. ಅರ್ಶ್ದೀಪ್ ಬಳಕೆಯಿಂದ ಬೌಲಿಂಗ್ಗೆ ತಜ್ಞತೆ ಮತ್ತು ವೈವಿಧ್ಯತೆಯ ಲಾಭ ಸಿಗಬಹುದು. ಜಹೀರ್ ಖಾನ್ ನಂತರ ಭಾರತಕ್ಕೊಂದು ಉತ್ತಮ ಎಡಗೈ ವೇಗಿಯ ಕೊರತೆಯೇ ಇದೆ. ಇದನ್ನು ತುಂಬಲು ಅರ್ಶ್ದೀಪ್ ಉತ್ತಮ ಆಯ್ಕೆ ಎನ್ನಬಹುದು.
ಬುಮ್ರಾ ಆಡುತ್ತಾರೋ ಇಲ್ಲವೋ ಎಂಬ ವಿಚಾರ ಸ್ಪಷ್ಟವಿಲ್ಲದರೂ, ಅಭಿಮಾನಿಗಳು ಅರ್ಶ್ದೀಪ್ ಅವರನ್ನು ಖಂಡಿತವಾಗಿಯೂ ಟೀಮ್ಇಂಡಿಯಾದ ಪ್ಲೇಯಿಂಗ್ ಇಲೆವೆನ್ನಲ್ಲಿ ಸೇರಿಸಬೇಕು ಎನ್ನುತ್ತಿದ್ದಾರೆ. ಈ ನಿರ್ಧಾರ ನಾಯಕ ಶುಭ್ಮನ್ ಗಿಲ್ ಮತ್ತು ಮಾರ್ಗದರ್ಶಕ ಗೌತಮ್ ಗಂಭೀರ್ ಅವರ ಕೈಯಲ್ಲಿದೆ.