ಹೊಸದಿಗಂತ ವರದಿ ವಿಜಯಪುರ:
ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತಾ ದೇಶದಲ್ಲಿ? ಇನ್ನು ಮುಂದೆ ದೇಶದಲ್ಲಿ ಯಾವತ್ತೂ ಕಾಂಗ್ರೆಸ್ ಅಧಿಕಾರಕ್ಕೆ ಬರಲ್ಲ ಎಂದು ಸಂಸದ ರಮೇಶ ಜಿಗಜಿಣಗಿ ಹೇಳಿದರು.
ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಆರ್ ಎಸ್ ಎಸ್ ಬ್ಯಾನ್ ಮಾಡುತ್ತೇವೆ ಎಂಬ ಪ್ರಿಯಾಂಕ್ ಖರ್ಗೆ ಹೇಳಿಕೆ ವಿಚಾರಕ್ಕೆ ನಗರದಲ್ಲಿ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್ ನಲ್ಲಿ ನಾಯಕತ್ವದ ಕೊರತೆ ಇದೆ. ಬಿಜೆಪಿ ಯವರು 11 ತಿಂಗಳಲ್ಲಿ ಏನೇನು ಮಾಡಿದ್ದಾರೆ ಎಲ್ಲ ಗೊತ್ತಿದೆಯಲ್ಲ, ಇದು ಮೀರಿಸಲು ಆಗತ್ತಾ ?, ಅವರಿಗೆ ಮೈನಾರಿಟಿ, ಹರಿಜನರು ಬ್ಯಾಕ್ ವರ್ಡ್ ಕ್ಲಾಸ್ ಎನ್ನುವದು ಅವರ ತಲೆಯಲ್ಲಿ ಇದೆ. ಇವರೇನು ರಾಜ್ಯದಲ್ಲಿ ಮತ್ತೆ ಅಧಿಕಾರಕ್ಕೆ ಬರಲ್ಲ ಎಂದರು.
ಪ್ರಿಯಾಂಕ್ ಖರ್ಗೆ ಇನ್ನೂ ಸಣ್ಣ ಹುಡುಗ, ಅವನಿಗೆ ಇನ್ನೂ ಮ್ಯಾಚ್ಯೂರಿಟಿ ಇಲ್ಲ ಎಂದರು.