ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೇರಳ ಮಾಜಿ ಮುಖ್ಯಮಂತ್ರಿ ವಿ.ಎಸ್. ಅಚ್ಯುತಾನಂದನ್ ಅವರ ನಿಧನರಾಗಿದ್ದಾರೆ.
ವೆಲಿಕ್ಕಕತು ಶಂಕರನ್ ಅಚ್ಯುತಾನಂದನ್ರನ್ನು ಜನರು ಪ್ರೀತಿಯಿಂದ ವಿಎಸ್ ಎಂದೇ ಕರೆಯುತ್ತಿದ್ದರು. ಜುಲೈ 21ರ ಸೋಮವಾರ ಮಧ್ಯಾಹ್ನ 3.20 ಕ್ಕೆ ತಿರುವನಂತಪುರದ ಎಸ್ಯುಟಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. ಅವರಿಗೆ 101 ವರ್ಷ ವಯಸ್ಸಾಗಿತ್ತು.
2019 ರಲ್ಲಿ ಪಾರ್ಶ್ವವಾಯುವಿಗೆ ಒಳಗಾದ ನಂತರ ಅವರು ಹಾಸಿಗೆ ಹಿಡಿದಿದ್ದರು.
1964 ರಲ್ಲಿ ಭಾರತೀಯ ಕಮ್ಯುನಿಸ್ಟ್ ಪಕ್ಷ (ಸಿಪಿಐ) ವನ್ನು ತೊರೆದು ಸಿಪಿಐ (ಎಂ) ಸ್ಥಾಪಿಸಿದ 32 ಜನರಲ್ಲಿ ಉಳಿದಿರುವ ಏಕೈಕ ನಾಯಕ ವಿಎಸ್. ರಾಜ್ಯ ವಿಧಾನಸಭೆಯಲ್ಲಿ ಮೂರು ಬಾರಿ ವಿರೋಧ ಪಕ್ಷದ ನಾಯಕರಾಗಿದ್ದ ವಿಎಸ್, ಸಿಪಿಐ (ಎಂ) ನ ರಾಜ್ಯ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದರು. ಅವರು 2021 ರವರೆಗೆ ವಿಧಾನಸಭೆಯ ಸದಸ್ಯರಾಗಿದ್ದರು.
ಅವರು 2006ರ ಮೇ 18 ರಂದು ಮುಖ್ಯಮಂತ್ರಿಯಾಗಿ ಆಯ್ಕೆಯಾದರು, 2011ರ ಮೇ 14ರವರೆಗೆ ಈ ಹುದ್ದೆಯಲ್ಲಿ ಸೇವೆ ಸಲ್ಲಿಸಿದರು. 82 ನೇ ವಯಸ್ಸಿನಲ್ಲಿ, ಅವರು ಕೇರಳದ ಮುಖ್ಯಮಂತ್ರಿಯಾದ ಅತ್ಯಂತ ಹಿರಿಯ ವ್ಯಕ್ತಿಯಾಗಿದ್ದರು.