ಗಂಗೈಕೊಂಡ ಚೋಳಪುರಂ ದೇಗುಲಕ್ಕೆ ಪ್ರಧಾನಿ ಭೇಟಿ: ದೇಶದ ಪ್ರಗತಿಗಾಗಿ ಪ್ರಾರ್ಥಿಸಿದ ಮೋದಿ!

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಚೋಳರ ಅರಸ ರಾಜೇಂದ್ರ ಚೋಳ-I ಅವರ ಜನ್ಮದಿನದ ಹಿನ್ನೆಲೆ ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ಐತಿಹಾಸಿಕ ತಮಿಳುನಾಡಿನ ಗಂಗೈಕೊಂಡ ಚೋಳಪುರಂ ದೇವಾಲಯಕ್ಕೆ ಭೇಟಿ ನೀಡಿದರು.

ಸಾಂಪ್ರದಾಯಿಕ ಉಡುಗೆ ತೊಟ್ಟಿದ್ದ ಪ್ರಧಾನಿಯವರನ್ನು ದೇವಾಲಯದ ಅರ್ಚಕರು ಪೂರ್ಣ ಕುಂಭದೊಂದಿಗೆ ಬರಮಾಡಿಕೊಂಡರು.

ವೈದಿಕ ಮತ್ತು ಶೈವ ತಿರುಮುರೈ ಮಂತ್ರಗಳ ನಡುವೆ, ಪ್ರಧಾನಿ ಮೋದಿ ದೇವಾಲಯದಲ್ಲಿ ಪ್ರಾರ್ಥನೆ ಸಲ್ಲಿಸಿದರು ಮತ್ತು ಪವಿತ್ರ ಗಂಗಾ ನದಿಯ ನೀರಿನಿಂದ ತುಂಬಿದ್ದ ಕಲಶ ತಂದರು.

ಯುನೆಸ್ಕೋ ಪರಂಪರೆಯ ತಾಣವಾದ ಚೋಳರ ದೇವಾಲಯಗಳ ಭಾಗವಾಗಿರುವ ಈ ದೇವಾಲಯದ ಒಳ ಕಾರಿಡಾರ್ ಅನ್ನು ಪ್ರಧಾನಿ ಪ್ರದಕ್ಷಿಣೆ ಹಾಕಿದರು. ಅವರು ದೀಪರಾಧನೈ ನಡೆಸುವ ಮೂಲಕ ಪ್ರಾರ್ಥನೆ ಸಲ್ಲಿಸಿದರು.

ದೇವಾಲಯದಲ್ಲಿ ಪ್ರಾರ್ಥನೆ ಸಲ್ಲಿಸಿದ ನಂತರ ಮೋದಿ, ನಾನು 140 ಕೋಟಿ ಭಾರತೀಯರ ಕಲ್ಯಾಣಕ್ಕಾಗಿ, ದೇಶದ ಪ್ರಗತಿಗಾಗಿ ಪ್ರಾರ್ಥಿಸಿದೆ. ರಾಜ ರಾಜ ಚೋಳ, ರಾಜೇಂದ್ರ ಚೋಳ ಅವರ ಹೆಸರುಗಳು ಭಾರತದ ಗುರುತು, ಹೆಮ್ಮೆಗೆ ಸಮಾನಾರ್ಥಕವಾಗಿವೆ ಎಂದು ಹೇಳಿದರು.

ಐತಿಹಾಸಿಕ ಮತ್ತು ವಾಸ್ತುಶಿಲ್ಪದ ತೊಟ್ಟಿಲಾಗಿರುವ ಗಂಗೈಕೊಂಡ ಚೋಳಪುರಂ ಅನ್ನು ಆಯ್ಕೆ ಮಾಡಿರುವುದು, ತಮಿಳುನಾಡಿನ ಶ್ರೀಮಂತ ಸಾಂಸ್ಕೃತಿಕ ಪರಂಪರೆಯನ್ನು ಸಂರಕ್ಷಿಸುವ ಮತ್ತು ಉತ್ತೇಜಿಸುವ ಕೇಂದ್ರ ಸರ್ಕಾರದ ಬದ್ಧತೆಯನ್ನು ಒತ್ತಿಹೇಳುತ್ತದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!