ಹೊಸದಿಗಂತ ಡಿಜಿಟಲ್ ಡೆಸ್ಕ್:
ಯುಜುವೇಂದ್ರ ಚಹಲ್ ಅವರಿಂದ ವಿಚ್ಛೇದನ ಪಡೆದಿರುವ ಅವರ ಮಾಜಿ ಪತ್ನಿ ಧನಶ್ರೀ ವರ್ಮಾ ತಮ್ಮ ಮನದಾಳದ ಮಾತನ್ನು ಹಂಚಿಕೊಂಡಿದ್ದಾರೆ.
ಮಂಗಳವಾರ ಹ್ಯೂಮನ್ ಆಫ್ ಬಾಂಬೆ ಪಾಡ್ಕ್ಯಾಸ್ಟ್ನಲ್ಲಿ ಮಾತನಾಡಿರುವ ವರ್ಮಾ, ವಿಚ್ಚೇದನ ಪಡೆದ ದಿನವನ್ನು ನೆನಪು ಮಾಡಿಕೊಂಡಿದ್ದಾರೆ. ಮಾನಸಿಕವಾಗಿ ಸಿದ್ಧವಾಗಿದ್ದರೂ ಕೋರ್ಟ್ ನಲ್ಲಿ ಎಲ್ಲರೆದುರು ಜೋರಾಗಿ ಅಳಲು ಪ್ರಾರಂಭಿಸಿದ್ದೆ. ಆ ಸಮಯದಲ್ಲಿ ನನ್ನ ಭಾವನೆಯನ್ನು ವ್ಯಕ್ತಪಡಿಸಲು ನನಗೆ ಸಾಧ್ಯವಾಗಲಿಲ್ಲ. ನಾನು ಅಳುತ್ತಲೇ ಇದ್ದೆ. ಚಹಾಲ್ಮೊದಲು ಹೊರ ನಡೆದರು ಎಂದು ತಿಳಿಸಿದ್ದಾರೆ.
ನ್ಯಾಯಾಲಯದ ಕಲಾಪ ನಡೆಯುವಾಗ ಚಹಾಲ್ ಧರಿಸಿದ್ದ ‘ಬಿ ಯುವರ್ ಓನ್ ಶುಗರ್ ಡ್ಯಾಡಿ’ ಎಂಬ ಬರಹವಿರುವ ಟೀ ಶರ್ಟ್ ವಿವಾದಕ್ಕೆ ಕಾರಣವಾಗಿತ್ತು. ಈ ಘಟನೆ ಕುರಿತು ಮಾತನಾಡಿದ ವರ್ಮಾ, ಜನರು ನಿಮ್ಮನ್ನು ದೂಷಿಸುತ್ತಾರೆ ಎಂದು ನಿಮಗೆ ತಿಳಿದಿದೆ, ಈ ಟೀ-ಶರ್ಟ್ ಸ್ಟಂಟ್ ನಡೆದಿದೆ ಎಂದು ನಾನು ತಿಳಿಯುವ ಮೊದಲು, ಜನರು ಇದಕ್ಕೆ ನನ್ನನ್ನು ದೂರುತ್ತಾರೆ ಎಂಬುದು ನಮಗೆಲ್ಲರಿಗೂ ತಿಳಿದಿತ್ತು ಎಂದು ಹೇಳಿದ್ದಾರೆ.
ಮಹಿಳೆಯಾಗಿ, ಎಲ್ಲವನ್ನೂ ಇತ್ಯರ್ಥಗೊಳಿಸಲು ಮತ್ತು ನಿರ್ವಹಿಸಲು ನಮಗೆ ಕಲಿಸಲಾಗುತ್ತದೆ. ನಮ್ಮ ಸಮಾಜಗಳನ್ನು ನಾವು ಚೆನ್ನಾಗಿ ತಿಳಿದಿರುವ ಕಾರಣ ನಮ್ಮ ತಾಯಂದಿರಿಗೆ ನಮ್ಮ ಸಮಾಜ ಚೆನ್ನಾಗಿ ತಿಳಿದಿದೆ ಎಂದು ಹೇಳಿದರು.
ವರ್ಮಾ ಮತ್ತು ಚಾಹಲ್ ಇಬ್ಬರೂ 2020 ರಲ್ಲಿ ವಿವಾಹವಾಗಿದ್ದರು. 2025 ರಲ್ಲಿ ವಿಚ್ಚೇದನ ಪಡೆದರು. ಈ ಹಿಂದೆ ವಿಚ್ಚೇದನದಿಂದ ಎದುರಿಸಿದ ಮಾನಸಿಕ ಹೋರಾಟದ ಬಗ್ಗೆ ಚಹಾಲ್ ಕೂಡಾ ಮಾತನಾಡಿದ್ದರು.