ಹೊಸದಿಗಂತ ಡಿಜಿಟಲ್ ಡೆಸ್ಕ್:
ತಮಿಳುನಾಡು ವಿಧಾನಸಭಾ ಚುನಾವಣೆಗೆ ಭರದ ಸಿದ್ಧತೆ ನಡೆಯುತ್ತಿದ್ದು, ಈ ನಡುವೆ ಟಿವಿಕೆ ಸಂಸ್ಥಾಪಕ ವಿಜಯ್ ಹಾಗೂ ಆಡಳಿತಾರೂಢ ಡಿಎಂಕೆ ನಡುವಣ ವಾಗ್ದಾಳಿ ತೀವ್ರಗೊಂಡಿದೆ.
ಮುಖ್ಯಮಂತ್ರಿ 1.31 ಕೋಟಿ ಮಹಿಳೆಯರ ಖಾತೆಗಳಿಗೆ ತಲಾ 5,000 ಜಮಾ ಮಾಡಿದ್ದಾರೆ. ಇದನ್ನು ವಿಜಯ್ ಈ ಟೀಕಿಸಿದ್ದಾರೆ. ಯಾರಾದರೂ ಹಣವನ್ನು ನೀಡಿದರೆ ಅದನ್ನು ತೆಗೆದುಕೊಳ್ಳಿ, ಆದರೆ ನಿಮ್ಮ ಇಚ್ಛೆಯಂತೆ ಮತ ಹಾಕಿ ಎಂದು ಮತದಾರರಿಗೆ ಹೇಳಿದರು.
ಇದೀಗ ವಿಜಯ್ ಮಾತಿಗೆ ಪ್ರತಿಕ್ರಿಯಿಸಿದ ಡಿಎಂಕೆ ನಾಯಕ ಟಿಕೆಎಸ್ ಇಳಂಗೋವನ್,ವಿಜಯ್ ಸರಳವಾಗಿ ಸಿಎಂ ಆಗಲು ಬಯಸುತ್ತಿದ್ದಾರೆ. ಈ ಹಿಂದೆ ಹಲವಾರು ನಟರು ರಾಜಕೀಯ ಪಕ್ಷಗಳನ್ನು ಪ್ರಾರಂಭಿಸಿದ್ದಾರೆ ಮತ್ತು ಭಾರಿ ಜನರನ್ನು ಸೆಳೆದಿದ್ದಾರೆ ಆದರೆ ರಾಜಕೀಯವಾಗಿ ಉಳಿಯುವಲ್ಲಿ ವಿಫಲರಾಗಿದ್ದಾರೆ. ವಿಜಯ್ ಜನಹಿತಕ್ಕಾಗಿ ಯಾವುದೇ ಹೋರಾಟದಲ್ಲಿ ಭಾಗವಹಿಸಿಲ್ಲ, ಅವರ ಉದ್ದೇಶ ಜನರಲ್ಲ, ಅವರು ಮುಖ್ಯಮಂತ್ರಿಯಾಗುವ ಹೆಬ್ಬಯಕೆ ಹೊಂದಿದ್ದಾರೆ ಎಂದರು.
ಮಹಿಳೆಯರಿಗೆ ಮಾಸಿಕ ನಗದು ಜಮೆ ಸೇರಿದಂತೆ ಅದರ ಕಲ್ಯಾಣ ಯೋಜನೆಗಳನ್ನು ಕಾನೂನು ಅಡೆತಡೆಗಳ ಮೂಲಕ ಬಿಜೆಪಿ ನಿಲ್ಲಿಸಲು ಪ್ರಯತ್ನಿಸಿದರೂ ನ್ಯಾಯಸಮ್ಮತವಾಗಿ ಪೂರೈಸಲಾಗುತ್ತಿದೆ. ಫಲಾನುಭವಿಗಳ ಖಾತೆಗೆ ಹಣ ಜಮೆ ಮಾಡಲಾಗಿದೆ. ಪ್ರತಿಯೊಬ್ಬರ ಖಾತೆಗಳಿಗೂ ಹಣ ಹೋಗಿದೆ ಎಂದು ಹೇಳಿದ್ದಾರೆ. ಪ್ರತಿಯೊಂದು ಖಾತೆಗೂ ಹಣ ಹೋಗಿತ್ತು. ನಮ್ಮ ನೀತಿಯಲ್ಲಿ ಬದಲಾವಣೆ ಇಲ್ಲ. ತಿಂಗಳಿಗೆ 1,000 ರೂ.ಗಳನ್ನು ಕಳೆದ ಮೂರು ವರ್ಷಗಳಿಂದ ನೀಡುತ್ತಿದ್ದೇವೆ ಎಂದು ಅವರು ಹೇಳಿದರು.



