ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಷ್ಟಪಟ್ಟು ಕೆಲಸ ಮಾಡುವ ವ್ಯಕ್ತಿಗೆ ಲಾಭ ಸಿಗಬೇಕು, ಕಂಪನಿ, ಮಧ್ಯವರ್ತಿಗಳ ಜೊತೆ ದುಡಿಯುವವನೂ ಬೆಳೆಯಬೇಕು. ಆಪ್ ತಯಾರಿಸಿದ ಶ್ರೀಮಂತರಿಗೆ ಲಾಭ ಸಿಗದಿದ್ದರೂ ದುಡಿಯುವವರಿಗೆ ಸಿಗಬೇಕು ಎಂದು ಕೇಂದ್ರ ಸಚಿವ ಅಮಿತ್ ಶಾ ಹೇಳಿದ್ದಾರೆ.
ಭಾರತ್ ಟ್ಯಾಕ್ಸಿ ಬಗ್ಗೆ ಮಾತನಾಡುದ್ದು, ಇಲ್ಲಿ ಚಾಲಕರೇ ಮಾಲೀಕರು, ತಾವು ದುಡಿದ ಹಣದಲ್ಲಿ ಶೇ.80% ಹಣ ಚಾಲಕರಿಗೆ ಸಂದಾಯವಾಗಲಿದೆ. ಇದರಲ್ಲಿ ಯಾವ ಕಮಿಷನ್ ಇಲ್ಲ. ಕನಿಷ್ಠ ಸದಸ್ಯತ್ವ ಶುಲ್ಕ ಇರಲಿದೆ. ಇನ್ನು ಸರ್ಜ್ ಹಣ ತೆಗೆದುಕೊಳ್ಳೋದಿಲ್ಲ. ಚಾಲಕರು 500 ರೂ. ಮಾತ್ರ ಹೂಡಿಕೆ ಮಾಡಿ ಈ ಸಹಕಾರದ ಭಾಗವಾಗಬಹುದು ಎಂದು ತಿಳಿಸಿದ್ದಾರೆ.
ಫೆಬ್ರವರಿ 5 ರಂದು ಪ್ರಾರಂಭವಾದ ಭಾರತ್ ಟ್ಯಾಕ್ಸಿ ಭಾರತದ ಮೊದಲ ಸಹಕಾರಿ ರೈಡ್-ಹೇಲಿಂಗ್ ಸೇವೆಯಾಗಿದ್ದು, ಸರ್ಕಾರದ ಬೆಂಬಲದೊಂದಿಗೆ ಅಮೂಲ್, ಐಎಫ್ಸಿಒ ಮತ್ತು ನಾಬಾರ್ಡ್ ಸಂಸ್ಥೆಗಳ ಸಹಯೋಗದಿಂದ ಕಾರ್ಯನಿರ್ವಹಿಸುತ್ತದೆ. ಇತರ ಖಾಸಗಿ ಆ್ಯಪ್ಗಳಂತಲ್ಲದೆ, ಇದು ಚಾಲಕರೇ ಮಾಲೀಕರಾಗಿರುವ ಮಾದರಿಯನ್ನು ಅಳವಡಿಸಿಕೊಂಡಿದೆ. ಇದರಿಂದಾಗಿ ಕೆಲಸ ಮಾಡುವವರಿಗೇ ಹೆಚ್ಚಿನ ಲಾಭ ತಲುಪುತ್ತದೆ ಎಂದಿದ್ದಾರೆ.



