March 21, 2026
Saturday, March 21, 2026
spot_img

ಹಠಾತ್ ಪ್ರವಾಹ: ಮಣಿಮಹೇಶ ಯಾತ್ರೆ ವೇಳೆ ಹತ್ತು ಯಾತ್ರಿಕರು ಸಾವು, 5,000 ಭಕ್ತರ ಸ್ಥಳಾಂತರ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮಣಿಮಹೇಶ ಯಾತ್ರೆಯ ವೇಳೆ ಹತ್ತು ಯಾತ್ರಿಕರು ಸಾವನ್ನಪ್ಪಿದ್ದಾರೆ ಮತ್ತು ಎಂಟು ಮಂದಿ ಕಾಣೆಯಾಗಿದ್ದಾರೆ.ಭರ್ಮೋರ್ ಪ್ರದೇಶದಲ್ಲಿ ಸಿಲುಕಿಕೊಂಡಿದ್ದ ಸುಮಾರು 5,000 ಭಕ್ತರನ್ನು ಕಲ್ಸುಯಿನ್‌ನಿಂದ ನೂರ್ಪುರ್ ಮತ್ತು ಪಠಾಣ್‌ಕೋಟ್‌ಗೆ ಸುರಕ್ಷಿತವಾಗಿ ಸ್ಥಳಾಂತರಿಸಲಾಗಿದೆ.

ಪಾಂಗ್ ಅಣೆಕಟ್ಟಿನ ನೀರಿನ ಮಟ್ಟ ಅಪಾಯದ ಮಟ್ಟಕ್ಕಿಂತ ಹೆಚ್ಚಿರುವುದರಿಂದ ಧರ್ಮಶಾಲಾ ಮತ್ತು ಮೆಕ್ಲಿಯೋಡ್‌ಗಂಜ್ ಅಪಾಯದಲ್ಲಿವೆ. ಭೂಕುಸಿತದಿಂದಾಗಿ ಕಿರಾತ್‌ಪುರ-ಮನಾಲಿ ರಾಷ್ಟ್ರೀಯ ಹೆದ್ದಾರಿಯೂ ಮತ್ತೆ ಸ್ಥಗಿತಗೊಂಡಿದೆ.ರಕ್ಷಣಾ ಕಾರ್ಯಾಚರಣೆಯಲ್ಲಿ ಸಹಾಯ ಮಾಡಲು ಪೊಲೀಸ್ ಸಿಬ್ಬಂದಿ, ಗೃಹರಕ್ಷಕರು, ಸ್ವಯಂಸೇವಕರು, ಎನ್‌ಸಿಸಿ ಕೆಡೆಟ್‌ಗಳು, ಸ್ಥಳೀಯ ನಿವಾಸಿಗಳು ಮತ್ತು ನಾಗರಿಕ ಅಧಿಕಾರಿಗಳನ್ನು ಒಳಗೊಂಡ ಏಳು ರಕ್ಷಣಾ ತಂಡಗಳನ್ನು ನಿಯೋಜಿಸಲಾಗಿದೆ .

ಭಾರೀ ಮಳೆ ಮತ್ತು ನಂತರದ ಹಠಾತ್ ಪ್ರವಾಹದಿಂದಾಗಿ, ರಸ್ತೆಗಳು ಕೊಚ್ಚಿಹೋಗಿ, ಸಂಪರ್ಕ ಕಡಿತಗೊಂಡಿದ್ದು, ಮಣಿಮಹೇಶ ಯಾತ್ರೆಗೆ ಹೋಗುವ ದಾರಿಯಲ್ಲಿ ಹತ್ತು ಭಕ್ತರು ಸಾವನ್ನಪ್ಪಿದ್ದಾರೆ ಮತ್ತು ಎಂಟು ಮಂದಿ ಕಾಣೆಯಾಗಿದ್ದಾರೆ.

ಪಾಂಗ್ ಅಣೆಕಟ್ಟಿನಿಂದ ಹೆಚ್ಚುವರಿ ನೀರು ಬಿಡುಗಡೆಯಾದ ನಂತರ ಹಿಮಾಚಲ ಪ್ರದೇಶದ ಮುಖ್ಯಮಂತ್ರಿ ಸುಖವಿಂದರ್ ಸಿಂಗ್ ಸುಖು ಅವರು ಭರ್ಮೌರ್, ಮಣಿಮಹೇಶ ಮತ್ತು ಚಂಬಾ ಜಿಲ್ಲೆಯ ಇತರ ಪ್ರದೇಶಗಳು ಹಾಗೂ ಕಾಂಗ್ರಾ ಜಿಲ್ಲೆಯ ಫತೇಪುರ್ ಮತ್ತು ಮಾಂಡ್‌ ಸೇರಿದಂತೆ ವಿಪತ್ತು ಪೀಡಿತ ಪ್ರದೇಶಗಳ ವೈಮಾನಿಕ ಸಮೀಕ್ಷೆ ನಡೆಸಿದರು. ಆ

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !