ಹೊಸದಿಗಂತ ಡಿಜಿಟಲ್ ಡೆಸ್ಕ್:
ಇರಾನ್ನಿಂದ ಭಾರತಕ್ಕೆ ಬರುತ್ತಿದ್ದ ಕಚ್ಚಾ ತೈಲ ಟ್ಯಾಂಕರ್ ಚೀನಾಕ್ಕೆ ಮಾರ್ಗ ಬದಲಿಸಿದೆ ಎಂಬ ಸುದ್ದಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಸ್ಪಷ್ಟನೆ ನೀಡಿದ್ದು, ಪಾವತಿ ಸಮಸ್ಯೆಗಳ ಕಾರಣದಿಂದ ಟ್ಯಾಂಕರ್ ದಾರಿ ಬದಲಿಸಿದೆ ಎಂಬ ವರದಿಗಳನ್ನು ಸಂಪೂರ್ಣ ತಳ್ಳಿಹಾಕಿದೆ.
ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ ಈ ಕುರಿತಾಗಿ ಅಧಿಕೃತ ಹೇಳಿಕೆ ನೀಡಿ, ಇರಾನ್ನಿಂದ ತೈಲ ಆಮದುಗೆ ಯಾವುದೇ ಹಣಕಾಸು ಅಡಚಣೆಗಳಿಲ್ಲ ಎಂದು ಸ್ಪಷ್ಟಪಡಿಸಿದೆ.
ಇದನ್ನೂ ಓದಿ:
ಸಚಿವಾಲಯವು ಸಾಮಾಜಿಕ ಜಾಲತಾಣ X ನಲ್ಲಿ ಪ್ರಕಟಿಸಿದ ಪೋಸ್ಟ್ನಲ್ಲಿ, “ಗುಜರಾತ್ನ ವಾಡಿನಾರ್ಗೆ ಬರಬೇಕಿದ್ದ ಟ್ಯಾಂಕರ್ ಪಾವತಿ ಸಮಸ್ಯೆಯಿಂದ ಚೀನಾಕ್ಕೆ ತಿರುಗಿದೆ ಎಂಬ ಸುದ್ದಿ ವಾಸ್ತವಕ್ಕೆ ವಿರುದ್ಧವಾಗಿದೆ” ಎಂದು ತಿಳಿಸಿದೆ. ಕಂಪನಿಗಳು ವಾಣಿಜ್ಯ ಮತ್ತು ಲಾಜಿಸ್ಟಿಕ್ ಅಗತ್ಯಗಳ ಆಧಾರದ ಮೇಲೆ ಮಧ್ಯಪ್ರಯಾಣದಲ್ಲಿಯೇ ಗಮ್ಯಸ್ಥಾನ ಬದಲಿಸುವುದು ಸಾಮಾನ್ಯ ಪ್ರಕ್ರಿಯೆ ಎಂದು ಹೇಳಿದೆ.
ಭಾರತವು ಪ್ರಸ್ತುತ 40ಕ್ಕೂ ಹೆಚ್ಚು ದೇಶಗಳಿಂದ ಕಚ್ಚಾ ತೈಲವನ್ನು ಆಮದು ಮಾಡಿಕೊಳ್ಳುತ್ತಿದೆ. ಜಾಗತಿಕ ಮಾರುಕಟ್ಟೆ ಪರಿಸ್ಥಿತಿಯನ್ನು ಗಮನದಲ್ಲಿಟ್ಟು ಸಂಸ್ಕರಣಾ ಕಂಪನಿಗಳು ವಿವಿಧ ಮೂಲಗಳಿಂದ ತೈಲ ಖರೀದಿಸುತ್ತಿವೆ ಎಂದು ಸಚಿವಾಲಯ ತಿಳಿಸಿದೆ.



