ಹೊಸದಿಗಂತ ವರದಿ ಬೆಳಗಾವಿ:
ಬೆಳಗಾವಿ ಜಿಲ್ಲೆಯ ಯರಗಟ್ಟಿ ಪಟ್ಟಣ ಸಮೀಪದ ನುಗ್ಗಾನಟ್ಟಿ ಗ್ರಾಮದ ರೌಡಿಶೀಟರ್ ನೀಲಕಂಠ ಮುದಕಪ್ಪ ಮನವಾಡಕರ (26) ಎಂಬಾತನನ್ನು 6 ತಿಂಗಳ ಕಾಲ ಬೆಳಗಾವಿ ಜಿಲ್ಲೆಯಿಂದ ಗಡಿಪಾರು ಮಾಡಿ ಮಾನ್ಯ ಪೊಲೀಸ್ ಅಧೀಕ್ಷಕರು ಬೆಳಗಾವಿ ಜಿಲ್ಲೆ ಮತ್ತು ವಿಶೇಷ ಕಾರ್ಯನಿರ್ವಾಹಕ ದಂಡಾಧಿಕಾರಿಗಳು ಬೆಳಗಾವಿ ಆದೇಶ ಹೊರಡಿಸಿದ್ದಾರೆ.
ಪರಿಸರ ಪ್ರವಾಸೋದ್ಯಮ ಆರೋಪಿತನು ಮಾಡಮಗೇರಿ ಗ್ರಾಮದ ಮುಗ್ಧ ದಲಿತ ಮಹಿಳೆಗೆ ಹೆದರಿಸಿ ಜಮೀನು ಕಬಳಿಸಲು ಯತ್ನ, ನುಗ್ಗಾನಟ್ಟಿ ಗ್ರಾಮದ ಅಮಾಯಕ ಯುವಕ ರಾಜು ಮುದ್ದನ್ನವರನನ್ನು ರೌಡಿ ಸಹಚರರೊಂದಿಗೆ ಸೇರಿ ಕೊಲೆ ಮಾಡಿದ ಪ್ರಕರಣ ಮತ್ತು ಯರಝರ್ವಿ ಗ್ರಾಮದ ನಡು ರಸ್ತೆಯಲ್ಲಿ ಕುಟರನಟ್ಟಿ ಗ್ರಾಮದ ವ್ಯಕ್ತಿಯ ಮೇಲೆ ಹಲ್ಲೆ ಸೇರಿದಂತೆ ಅನೇಕರು ಕೃತ್ಯಗಳು ಆದರಿಸಿ ಈತನನ್ನು ಆರು ತಿಂಗಳ ವರೆಗೆ ಜಿಲ್ಲೆಯಿಂದ ಗಡಿಪಾರು ಮಾಡಲಾಗಿದೆ.
ಈತನ ದೌರ್ಜನ್ಯದಿಂದ ನುಗ್ಗಾನಟ್ಟಿ, ಯರಗಟ್ಟಿ, ಬೂದಿಗೊಪ್ಪ, ಯರಝರ್ವಿ, ಕುಟರನಟ್ಟಿ, ಮಾಡಮಗೇರಿ, ಗೋಕಾಕ, ಖನಗಾಂವ, ಬೆಣಚಿನಮರಡಿ ಮತ್ತು ಗುಧಟ್ಟಿ ಗ್ರಾಮಸ್ಥರು ನೆಮ್ಮದಿಯಿಂದ ಜೀವನ ಮಾಡಲಾಗದ ಪರಿಸ್ಥಿತಿ ನಿರ್ಮಾಣವಾಗಿತ್ತು. ಈತನ ಉಪಟಳ, ಸಾಮಾಜಿಕ ಜಾಲತಾಣದಲ್ಲಿ ಫೋಟೋ-ವಿಡಿಯೋ ಹರಿಬಿಟ್ಟು ಸಾರ್ವಜನಿಕರಲ್ಲಿ ಭಯ ಹುಟ್ಟಿಸುತ್ತಿದ್ದ ಎನ್ನಲಾಗಿತು.
ಇದನ್ನೂ ಓದಿ:
ಸಾಕ್ಷಿದಾರರಿಗೂ ಬೆದರಿಕೆ ಹಾಕುತ್ತಿದ್ದ ಪೊಲೀಸ್ ಇನ್ಸ್ ಪೆಕ್ಟರ್ ಮುರಗೋಡ ರವರ ವರದಿ ಆದರಿಸಿ ಮಾನ್ಯ ಪೊಲೀಸ್ ಅಧೀಕ್ಷಕರು ಬೆಳಗಾವಿ ಜಿಲ್ಲೆ ಮತ್ತು ವಿಶೇಷ ಕಾರ್ಯ ನಿರ್ವಾಹಕ ದಂಡಾಧಿಕಾರಿಗಳು ಬೆಳಗಾವಿರವರು ಈತನನ್ನು 6 ತಿಂಗಳ ಕಾಲ ಜಿಲ್ಲೆಯಿಂದ ಗಡಿಪಾರು ಮಾಡಿ ಆದೇಶಿಸಿದ್ದಾರೆ.
ಮುರಗೋಡ ಪೊಲೀಸರು ಆರೋಪಿಯನ್ನು ಧಾರವಾಡ ಜಿಲ್ಲೆಗೆ ಕರೆದೊಯ್ದು ಹಾಜರುಪಡಿಸಿದ್ದಾರೆ ರೌಡಿ ವ್ಯಕ್ತಿ ಗಡಿಪಾರು ಆದೇಶ ಎಲ್ಲಾ ರೌಡಿಗಳಿಗೆ ಎಚ್ಚರಿಕೆ ಘಂಟೆ ಪೋಲಿಸ್ ಇಲಾಖೆ ದಿಟ್ಟ ಹೆಜ್ಜೆ ರೌಡಿ ಶೀಟರ್ ಗಳಿಗೆ ನಡುಕ ಹುಟ್ಟಿಸಿದ ಪೊಲೀಸರ ನಡೆ ಸಾರ್ವಜನಿಕರ ನೆಮ್ಮದಿಗೆ ದಿಟ್ಟ ಹೆಜ್ಜೆ ಇಟ್ಟ ಪೋಲಿಸ್ ಇಲಾಖೆಗೆ ಪ್ರಶಂಸೆ ವ್ಯಕ್ತವಾಗಿದೆ.



