ಹೊಸದಿಗಂತ ಡಿಜಿಟಲ್ ಡೆಸ್ಕ್:
ತಮಿಳುನಾಡು ಸಿಎಂ ವಿಜಯ್ ದಳಪತಿಗೆ ಸಿಎಂ ಸಿದ್ದರಾಮಯ್ಯ ಕರೆ ಮಾಡಿದ್ದು, ನೀವು ಹಿಸ್ಟರಿ ಕ್ರಿಯೇಟ್ ಮಾಡಿಬಿಟ್ರಿ ಎಂದು ಅಭಿನಂದನೆ ಸಲ್ಲಿಸಿದ್ದಾರೆ.
ಈ ಬಗ್ಗೆ ಆಡಿಯೋವೊಂದು ವೈರಲ್ ಆಗಿದ್ದು, ನಾನು ಸಿದ್ದರಾಮಯ್ಯ ಮಾತಾಡ್ತಾ ಇದಿನಿ. ವಿಜಯ್ ನೀವು ಇತಿಹಾಸ ಸೃಷ್ಟಿ ಮಾಡಿದ್ದೀರಿ. ಬೆಂಗಳೂರಿಗೆ ಬನ್ನಿ ಭೇಟಿಯಾಗೋಣ ಎಂದು ಆಹ್ವಾನ ನೀಡಿದ್ದಾರೆ.
ಸಿನಿಮಾ ಪ್ರಪಂಚದಿಂದ ಹೆಸರು ಗಳಿಸಿ, ಜನರ ಸೇವೆಯತ್ತ ದಾಪುಗಾಲು ಇಟ್ಟಿದ್ದೀರಿ. ಜೋಸೆಫ್ ವಿಜಯ್ ಅವರೇ ನಿಮಗೆ ಅಭಿನಂದನೆಗಳು. ಸಾಮಾಜಿಕ ನ್ಯಾಯಕ್ಕಾಗಿ ಎಲ್ಲರೂ ಒಟ್ಟಿಗೇ ಕೆಲಸ ಮಾಡೋಣ ಎಂದಿದ್ದಾರೆ.



