ಹೊಸದಿಗಂತ ವರದಿ ವಿಜಯನಗರ:
ಹಗರಿಬೊಮ್ಮನಹಳ್ಳಿ ತಾಲೂಕಿನ ಬನ್ನಿಕಲ್ಲು ಗ್ರಾಮದಲ್ಲಿ ಒಣ ಭೂಮಿಯಲ್ಲಿ ಕೊರೆಸಿದ ಬೋರ್ವೆಲ್ ಒಂದರಲ್ಲಿ ಭಾರೀ ಪ್ರಮಾಣದ ನೀರು ಬಾನೆತ್ತರಕ್ಕೆ ಚಿಮ್ಮಿದ ಅಪರೂಪದ ಘಟನೆ ನಡೆದಿದೆ.
ಗ್ರಾಮದ ರೈತ ಸುನೀಲ್ ಎಂಬುವವರು ತಮ್ಮ ಬೆದ್ದಲು (ಖುಷ್ಕಿ) ಭೂಮಿಯಲ್ಲಿ ಕೃಷಿ ಉದ್ದೇಶಕ್ಕಾಗಿ ಬೋರ್ವೆಲ್ ಕೊರೆಸುತ್ತಿದ್ದರು. ಈ ವೇಳೆ ಅಂತರ್ಜಲದ ಭಾರೀ ಒತ್ತಡಕ್ಕೆ ಸಿಲುಕಿದ ಜಲಧಾರೆ, ಪಂಪ್ ಅಳವಡಿಸುವ ಮುನ್ನವೇ ಕಾರಂಜಿಯಂತೆ ಮೇಲಕ್ಕೆ ಚಿಮ್ಮಿದೆ.
ಬರದ ನಾಡಿನಲ್ಲಿ ಗಂಗಾ ಮಾತೆಯ ಭರಪೂರ ಹರಿದು ಬಂದಿದ್ದನ್ನು ಕಂಡು ರೈತ ಸುನೀಲ್ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ರೋಮಾಂಚನಗೊಂಡಿದ್ದು, ಜಲಧಾರೆಗೆ ಪೂಜೆ ಸಲ್ಲಿಸಿ ಸಂಭ್ರಮಿಸಿದ್ದಾರೆ.



