ಹೊಸದಿಗಂತ ವರದಿ ಅಂಕೋಲಾ:
ಜಿಪ್ಸಂ ಗೊಬ್ಬರ ತುಂಬಿದ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಘಟನೆ ತಾಲೂಕಿನ ಅಡ್ಲೂರು ಸಮೀಪ ರಾಷ್ಟ್ರೀಯ ಹೆದ್ದಾರಿ52 ರಲ್ಲಿ ಸಂಭವಿಸಿದೆ.
ಕೇರಳದಿಂದ ಕೊಪ್ಪಳಕ್ಕೆ ಗೊಬ್ಬರ ಸಾಗಿಸುತ್ತಿದ್ದ ಲಾರಿ ಚಾಲಕನ ಅತಿವೇಗ ಮತ್ತು ನಿರ್ಲಕ್ಷ್ಯದ ಚಾಲನೆಯಿಂದ ವಿದ್ಯುತ್ ಕಂಬ ಮತ್ತು ಮರವೊಂದಕ್ಕೆ ಡಿಕ್ಕಿಯಾಗಿ ರಸ್ತೆ ಬದಿಗೆ ಪಲ್ಟಿಯಾಗಿದ್ದು ಲಾರಿಯಲ್ಲಿ,ತುಂಬುವ ಜಿಪ್ಸಂ ಗೊಬ್ಬರ ಸುತ್ತ ಮುತ್ತಲಿನ ಪರಿಸರದಲ್ಲಿ ಹರಡಿಕೊಂಡಿದೆ.
ಇದನ್ನೂ ಓದಿ:
ಅಪಘಾತದ ತೀವ್ರತೆಗೆ ಲಾರಿ ಸಂಪೂರ್ಣ ಜಖಂ ಆಗಿದ್ದು ಚಾಲಕ ಮತ್ತು ಕ್ಲೀನರ್ ಅಪಘಾತದಿಂದ ಪಾರಾಗಿದ್ದಾರೆ. ರಾಸಾಯನಿಕ ಗೊಬ್ಬರ ಹರಡಿರುವ ಪ್ರದೇಶದ ಸುತ್ತಮುತ್ತ ಜನವಸತಿ ಪ್ರದೇಶ ಕುಡಿಯುವ ನೀರಿನ ಬಾವಿಗಳು ಇದ್ದು ಮಳೆಯಿಂದ ಜಿಪ್ಸಂ ಕುಡಿಯುವ ನೀರಿನ ಬಾವಿ ಸೇರಿದರೆ ನೀರು ಕಲುಷಿತಗೊಂಡು ಕುಡಿಯಲು ಯೋಗ್ಯವಲ್ಲದಂತಾಗುವ ಸಾಧ್ಯತೆ ಇದೆ ಎಂದು ಸ್ಥಳೀಯರು ಆತಂಕ ವ್ಥಕ್ತಪಡಿಸಿದ್ದಾರೆ.



