July 15, 2026
Wednesday, July 15, 2026
spot_img

2006ರ ಬಿಡದಿ ಕನಸಿನ ಯೋಜನೆಗೆ ಮರುಜೀವವೇಕೆ? ಹೆಚ್.ಡಿ.ಕುಮಾರಸ್ವಾಮಿ ನೇರ ಪ್ರಶ್ನೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕೇಂದ್ರ ಸಚಿವ ಹೆಚ್‌.ಡಿ. ಕುಮಾರಸ್ವಾಮಿ ಅವರು ನವದೆಹಲಿಯಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. 2006 ರಲ್ಲಿ ತಾವು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ರಾಜಕಾಲುವೆ ಮೇಲೆ ರಸ್ತೆ ನಿರ್ಮಿಸುವ ಹಾಗೂ 5 ಪ್ರಮುಖ ಟೌನ್‌ಶಿಪ್‌ಗಳನ್ನು ಸ್ಥಾಪಿಸುವ ಐತಿಹಾಸಿಕ ತೀರ್ಮಾನ ಕೈಗೊಂಡಿದ್ದಾಗಿ ಹೆಚ್‌ಡಿಕೆ ನೆನಪಿಸಿದರು. ಡಿ.ಕೆ. ಶಿವಕುಮಾರ್ ಅವರಿಗೆ ಯಾವುದೇ ಸ್ವಂತಿಕೆ ಇಲ್ಲ ಹಾಗೂ ಅವರು ಪ್ರಧಾನಿ ಮೋದಿ ಅವರನ್ನು ನಕಲು ಮಾಡುತ್ತಿದ್ದಾರೆ ಎಂದು ಲೇವಡಿ ಮಾಡಿದರು.

ಬಿಡದಿ ಯೋಜನೆ ಮತ್ತು ರೈತರ ಹಿತರಕ್ಷಣೆ

“ಬಿಡದಿ ಯೋಜನೆ ನನ್ನ ಕನಸಲ್ಲ ಎಂದು ಈಗ ಹೇಳುತ್ತಿರುವವರು, ಅನಗತ್ಯವಾಗಿದ್ದರೆ ಅದಕ್ಕೆ ಏಕೆ ಕೈಹಾಕಿದ್ದಾರೆ?” ಎಂದು ಕುಮಾರಸ್ವಾಮಿ ಪ್ರಶ್ನಿಸಿದರು. ಹಿಂದೆ ಎಂ.ಬಿ. ಪಾಟೀಲ್ ಕೈಗಾರಿಕಾ ಸಚಿವರಾಗಿದ್ದ ಕಾಲದ ಭೂ ಹಂಚಿಕೆ ಪ್ರಕ್ರಿಯೆಗಳನ್ನು ಸ್ಮರಿಸಿದ ಅವರು, ತಾವೆಂದೂ ಮಧ್ಯವರ್ತಿಗಳನ್ನು ಬಳಸಿಕೊಂಡಿಲ್ಲ ಎಂದರು. ಬಲವಂತವಾಗಿ ರೈತರ ಭೂಮಿ ಕಿತ್ತುಕೊಂಡು ತಾವು ಯಾವುದೇ ಯೋಜನೆ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಕೇತಾಗನಹಳ್ಳಿ ಜಮೀನು ವಿವಾದಕ್ಕೆ ಸ್ಪಷ್ಟನೆ

ತಮ್ಮ ವೈಯಕ್ತಿಕ ಆಸ್ತಿಯ ಬಗ್ಗೆ ಮಾತನಾಡಿದ ಕುಮಾರಸ್ವಾಮಿ, ಕೇತಾಗನಹಳ್ಳಿಯಲ್ಲಿ ತಮಗಿರುವ ಜಮೀನನ್ನು ಚಿತ್ರರಂಗದಲ್ಲಿದ್ದಾಗಲೇ ಖರೀದಿಸಿದ್ದು, ಅದಿನ್ನೂ ಪೋಡಿಯಾಗಿಲ್ಲ ಮತ್ತು ತಾವು ಯಾರಿಗೂ ಬೆದರಿಕೆ ಹಾಕಿಲ್ಲ ಎಂದು ವಿವರಿಸಿದರು. ಸದ್ಯ ಬಿಡದಿ ಯೋಜನೆಗೆ ಸಂಬಂಧಿಸಿದಂತೆ ರಚಿಸಲು ಉದ್ದೇಶಿಸಿರುವ ಸಮಿತಿಯ ನೇತೃತ್ವದ ಕುರಿತು ಅವರು ಸರ್ಕಾರದ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !