July 27, 2026
Monday, July 27, 2026
spot_img

ಕಾಲಿವುಡ್‌ನಲ್ಲಿ ಮತ್ತೊಂದು ಪೊಲಿಟಿಕಲ್ ಧಮಾಕಾ: ದಳಪತಿ ವಿಜಯ್ ಹಾದಿಯಲ್ಲೇ ನಟ ಧನುಷ್?

ಹೊಸದಿಗಂತ ಡಿಜಿಟಲ್ ಡೆಸ್ಕ್:

ದಳಪತಿ ವಿಜಯ್ ಅವರ ಹಾದಿಯಲ್ಲೇ ನಟ ಧನುಷ್ ಕೂಡ ತಮಿಳುನಾಡು ರಾಜಕೀಯ ಅಂಗಳಕ್ಕೆ ಕಾಲಿಡಲಿದ್ದಾರೆಯೇ? ಹೀಗೊಂದು ಹೊಸ ಪ್ರಶ್ನೆ ಕಾಲಿವುಡ್ ಸಿನಿರಂಗದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಇತ್ತೀಚೆಗೆ ಚೆನ್ನೈನಲ್ಲಿ ನಡೆದ ಬೃಹತ್ ರಕ್ತದಾನ ಶಿಬಿರದಲ್ಲಿ ಧನುಷ್ ಅಭಿಮಾನಿಗಳನ್ನು ಉದ್ದೇಶಿಸಿ ಆಡಿದ ಮಾತುಗಳು ಈ ಅನುಮಾನಗಳಿಗೆ ನೇರ ಕಾರಣವಾಗಿವೆ.

ಸಿನಿಮಾದಿಂದ ಸಮಾಜ ಸೇವೆಯತ್ತ ಧನುಷ್ ಗಮನ

ಅಭಿಮಾನಿ ಸಂಘ ಆಯೋಜಿಸಿದ್ದ ಈ ಬೃಹತ್ ಕಾರ್ಯಕ್ರಮದಲ್ಲಿ ಸಾಗರಾದಿ ಸಾಗರವಾಗಿ ಹರಿದುಬಂದ ಜನಸ್ತೋಮವನ್ನು ಕಂಡು ಧನುಷ್ ಹರ್ಷ ವ್ಯಕ್ತಪಡಿಸಿದರು. ಕೇವಲ ಚಲನಚಿತ್ರಗಳ ಆಡಿಯೋ ರಿಲೀಸ್ ಹಾಗೂ ಅಭಿಮಾನಿಗಳ ಸಮಾವೇಶಕ್ಕೆ ಸೀಮಿತವಾಗಬೇಡಿ ಎಂದು ಕಿವಿಮಾತು ಹೇಳಿದರು. ಈ ಒಗ್ಗಟ್ಟಿನ ಶಕ್ತಿಯನ್ನು ಸಮಾಜದ ಒಳ್ಳೆಯ ಕಾರ್ಯಗಳಿಗೆ ಬಳಸಿಕೊಳ್ಳಿ ಎಂದು ನೇರ ಕರೆ ನೀಡಿದರು.

ಹೊಸ ಧ್ವಜ ಅನಾವರಣ: ಅನುಮಾನ ಇನ್ನಷ್ಟು ಬಲ

ನಿಮ್ಮ ಸುತ್ತಮುತ್ತಲಿನ ಜನರ ಕಷ್ಟ-ಕಾರ್ಪಣ್ಯಗಳಿಗೆ ತಕ್ಷಣ ಸ್ಪಂದಿಸಿ, ಸ್ಥಳೀಯರ ಅಗತ್ಯಗಳನ್ನು ಪೂರೈಸಿ ಎಂದು ಧನುಷ್ ಅಭಿಮಾನಿ ಬಳಗಕ್ಕೆ ಸೂಚಿಸಿದರು. ಇದೇ ವೇದಿಕೆಯಲ್ಲಿ ಅವರು ತಮ್ಮ ಅಭಿಮಾನಿ ಸಂಘದ ಹೊಸ ಧ್ವಜವನ್ನು ಅನಾವರಣಗೊಳಿಸಿದ್ದು, ಅವರ ರಾಜಕೀಯ ಪ್ರವೇಶದ ಮುನ್ಸೂಚನೆಯೇ ಎಂಬ ಕುತೂಹಲವನ್ನು ಸಾರ್ವಜನಿಕರಲ್ಲಿ ದ್ವಿಗುಣಗೊಳಿಸಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !