August 6, 2026
Thursday, August 6, 2026
spot_img

ಯಲ್ಲಾಪುರದಲ್ಲಿ ಕಾರು-ಬುಲೆರೋ ನಡುವೆ ಅಪಘಾತ: ಇಬ್ಬರಿಗೆ ಗಂಭೀರ ಗಾಯ

ಹೊಸದಿಗಂತ ವರದಿ ಯಲ್ಲಾಪುರ:

ಯಲ್ಲಾಪುರ ಪಟ್ಟಣದ ಎಪಿಎಂಸಿ ಸಮೀಪದ ಜಮೇಜಡ್ಡಿ ಕ್ರಾಸ್ ಬಳಿ, ಕಾರು ಹಾಗೂ ಬುಲೆರೋ ಪಿಕ್ ಅಪ್ ವಾಹನದ ನಡುವೆ ಅಪಘಾತ ಸಂಭವಿಸಿ ಇಬ್ಬರೂ ಗಾಯಗೊಂಡಿರುವ ಘಟನೆ ನಡೆದಿದೆ.

ಈ ಅಪಘಾತದಲ್ಲಿ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಯಲ್ಲಾಪುರದ ಶ್ರೀಪಾದ ಭಟ್ಟ ಹಾಗೂ ಲಕ್ಷ್ಮೀ ದೇಸಾಯಿ ಅವರಿಗೆ ಗಾಯವಾಗಿದೆ. ಅಪಘಾತದ ರಭಸಕ್ಕೆ ಬುಲೆರೋ ವಾಹನವು ರಸ್ತೆಯ ಅಂಚಿಗೆ ಇಳಿದು, ಕಾಡಿಗೆ ನುಗ್ಗಿದೆ.

ಇದನ್ನೂ ಓದಿ:

ಅಪಘಾತದಲ್ಲಿ ಕಾರು ಹಾಗೂ ಪಿಕ್ ಅಪ್ ವಾಹನ ಜಖಂಗೊಂಡಿವೆ. ಕೆಲವು ಸಮಯ ಈ ರಸ್ತೆಯಲ್ಲಿ ವಾಹನ ಸಂಚಾರ ವ್ಯತ್ಯಯವಾಗಿತ್ತು. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ತನಿಖೆ ಕೈಗೊಂಡಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !