August 15, 2026
Saturday, August 15, 2026
spot_img

2047ರ ವಿಕಸಿತ ಭಾರತಕ್ಕೆ ಪ್ರಧಾನಿ ಮೋದಿಯವರ 7 ಸೂತ್ರಗಳ ರೋಡ್‌ಮ್ಯಾಪ್: 1 ಕೋಟಿ ಯುವಕರಿಗೆ AI ತರಬೇತಿ ಘೋಷಣೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ದೇಶದ 80ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪುಕೋಟೆಯ ಮೇಲೆ ರಾಷ್ಟ್ರಧ್ವಜಾರೋಹಣ ನೆರವೇರಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಅವರು, ದೇಶದ ಭವಿಷ್ಯದ ದೃಷ್ಟಿಕೋನವನ್ನು ಸಾರುವ ಮೂರು ಪ್ರಮುಖ ವಿಷಯಗಳ ಮೇಲೆ ವಿಶೇಷ ಒತ್ತು ನೀಡಿದ್ದಾರೆ. ಯುವ ಪೀಳಿಗೆಯನ್ನು ತಲುಪುವುದು, ಅಭಿವೃದ್ಧಿಯ ಹೊಸ ಮಾರ್ಗಸೂಚಿ ಮತ್ತು ಆಂತರಿಕ ಭದ್ರತೆಗೆ ಇರುವ ಸವಾಲುಗಳ ಬಗ್ಗೆ ಪ್ರಧಾನಿ ತಮ್ಮ ಭಾಷಣದಲ್ಲಿ ವಿಸ್ತಾರವಾಗಿ ಮಾತನಾಡಿದ್ದಾರೆ.

Gen Z ಯುವ ಪೀಳಿಗೆಯ ತಲುಪುವಿಕೆ:

ಪ್ರಧಾನಿ ಮೋದಿ ಅವರು ಇಂದಿನ ಆಧುನಿಕ ಯುವ ಪೀಳಿಗೆಯಾದ ‘ಜೆನ್ ಜಿ’ ಯನ್ನು ದೇಶದ ಪ್ರಗತಿಯ ಮುಖ್ಯ ವಾಹಿನಿಗೆ ತರಲು ವಿಶೇಷ ಕರೆ ನೀಡಿದರು. ತಂತ್ರಜ್ಞಾನ, ಸ್ಟಾರ್ಟ್‌ಅಪ್ ಮತ್ತು ನಾವೀನ್ಯತೆಗಳಲ್ಲಿ ಮುಂಚೂಣಿಯಲ್ಲಿರುವ ಈ ಯುವಶಕ್ತಿಯು ಭಾರತವನ್ನು ಜಾಗತಿಕ ಮಟ್ಟದಲ್ಲಿ ಮುನ್ನಡೆಸಲಿದೆ. ಯುವಕರ ಆಲೋಚನೆಗಳಿಗೆ ಸರ್ಕಾರವು ಸಂಪೂರ್ಣ ಬೆಂಬಲ ನೀಡಲಿದ್ದು, ಅವರ ಕನಸುಗಳೇ ‘ವಿಕಸಿತ ಭಾರತ’ದ ಬುನಾದಿ ಎಂದು ಪ್ರಧಾನಿ ಹೇಳಿದರು. ಇದರೊಂದಿಗೆ 1 ಕೋಟಿ ಯುವಕರಿಗೆ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (AI) ಕೌಶಲ್ಯ ತರಬೇತಿ ನೀಡಲಾಗುವುದು ಎಂದು ಘೋಷಿಸಿದರು.

ಸಪ್ತಧಾರಾ ಮಾರ್ಗಸೂಚಿ:

ದೇಶದ ಸರ್ವತೋಮುಖ ಮತ್ತು ಸಮಗ್ರ ಅಭಿವೃದ್ಧಿಗಾಗಿ ಪ್ರಧಾನಿ ಮೋದಿ ಅವರು ‘ಸಪ್ತಧಾರಾ’ ಎಂಬ ದೃಢ ಮಾರ್ಗಸೂಚಿಯನ್ನು ದೇಶದ ಮುಂದಿಟ್ಟಿದ್ದಾರೆ. ಮೂಲಸೌಕರ್ಯ, ಶಿಕ್ಷಣ, ಆರೋಗ್ಯ, ಕೃಷಿ ಸುಧಾರಣೆ, ತಂತ್ರಜ್ಞಾನದ ಬಳಕೆ, ಮಹಿಳಾ ಸಬಲೀಕರಣ ಮತ್ತು ಸುಸ್ಥಿರ ಆರ್ಥಿಕ ಬೆಳವಣಿಗೆಯನ್ನು ಈ ಸಪ್ತಧಾರಾ ಒಳಗೊಂಡಿದೆ. 2047ರ ವೇಳೆಗೆ ಭಾರತವನ್ನು ಸಂಪೂರ್ಣ ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ಮಾಡಲು ಈ ಏಳು ತತ್ವಗಳು ದಾರಿದೀಪವಾಗಲಿವೆ ಎಂದು ಅವರು ವಿವರಿಸಿದರು.

ಇದನ್ನೂ ಓದಿ:

‘ದಿಮಾಗಿ’ ನಕ್ಸಲರ ವಿರುದ್ಧ ಎಚ್ಚರಿಕೆ:

ದೇಶದ ಆಂತರಿಕ ಭದ್ರತೆಗೆ ಧಕ್ಕೆ ತರುತ್ತಿರುವ ಶಕ್ತಿಗಳ ಬಗ್ಗೆ ಮಾತನಾಡಿದ ಪ್ರಧಾನಿ, ಕೇವಲ ಶಸ್ತ್ರಸಜ್ಜಿತ ನಕ್ಸಲರಷ್ಟೇ ಅಲ್ಲದೆ, ಸಮಾಜದಲ್ಲಿ ವೈಚಾರಿಕ ಗೊಂದಲ ಮೂಡಿಸುತ್ತಿರುವ ‘ದಿಮಾಗಿ’ ನಕ್ಸಲರ ಬಗ್ಗೆ ದೇಶದ ಜನರು ಜಾಗರೂಕರಾಗಿರಬೇಕು ಎಂದು ಎಚ್ಚರಿಸಿದರು. ದೇಶದ ಒಗ್ಗಟ್ಟು ಮತ್ತು ಪ್ರಗತಿಯನ್ನು ಸಹಿಸದ ಇಂತಹ ಶಕ್ತಿಗಳು ಯುವಕರ ಹಾದಿ ತಪ್ಪಿಸುತ್ತಿದ್ದು, ಇವುಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಮೋದಿ ಸ್ಪಷ್ಟಪಡಿಸಿದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !