July 21, 2026
Tuesday, July 21, 2026
spot_img

ನನ್ನ ಮಗ ರಾಜಾ ರೆಡ್ಡಿ ವೈಎಸ್ಆರ್ ಉತ್ತರಾಧಿಕಾರಿ: ವೈಎಸ್​ ಶರ್ಮಿಳಾ ಘೋಷಣೆ

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ವೈಎಸ್​ ಶರ್ಮಿಳಾ ಅವರ ಮಗ ರಾಜಕೀಯ ಎಂಟ್ರಿಕೊಡುವ ಸುಳಿವು ಸಿಕ್ಕಿದ್ದು, ಸಮಯ ಬಂದಾಗ ತಮ್ಮ ಮಗ ರಾಜಕೀಯ ಪ್ರವೇಶಿಸುವುದಾಗಿ ಇಂದು ಶರ್ಮಿಳಾ ಸಾರ್ವಜನಿಕವಾಗಿ ಘೋಷಿಸಿದ್ದಾರೆ.

ವೈಎಸ್ಆರ್ ರಾಜಾ ರೆಡ್ಡಿ ವೈಎಸ್ಆರ್ ಅವರ ನಿಜವಾದ ರಾಜಕೀಯ ಉತ್ತರಾಧಿಕಾರಿ. ಇದರ ಬಗ್ಗೆ ಯಾವುದೇ ಸಂದೇಹವಿಲ್ಲ ಎಂದು ವೈಎಸ್​ ಶರ್ಮಿಳಾ ಸ್ಪಷ್ಟಪಡಿಸಿದ್ದಾರೆ.

‘ನನ್ನ ಮಗ ಇನ್ನೂ ರಾಜಕೀಯಕ್ಕೆ ಕಾಲಿಟ್ಟಿಲ್ಲ. ವೈಎಸ್‌ಆರ್‌ಸಿಪಿ ಪಕ್ಷವು ರಾಜಕೀಯಕ್ಕೆ ಕಾಲಿಡುವ ಮೊದಲೇ ಇಷ್ಟೊಂದು ಗೊಂದಲ ಸೃಷ್ಟಿಸುತ್ತಿದ್ದರೆ ಇದಕ್ಕೆ ಭಯ ಎಂದೇ ಕರೆಯಬೇಕಲ್ಲವೇ? ನನ್ನ ತಂದೆ ವೈಎಸ್‌ಆರ್ ಸ್ವತಃ ನನ್ನ ಮಗನಿಗೆ ‘ವೈಎಸ್ ರಾಜಾ ರೆಡ್ಡಿ’ ಎಂದು ಹೆಸರಿಟ್ಟರು. ವೈಎಸ್‌ಆರ್‌ಸಿಪಿ ಎಷ್ಟೇ ಅಡೆತಡೆಗಳನ್ನು ಹೇರಿದರೂ, ಈ ಹೆಸರನ್ನು ಯಾರೂ ಬದಲಾಯಿಸಲು ಸಾಧ್ಯವಿಲ್ಲ” ಎಂದು ಶರ್ಮಿಳಾ ಹೇಳಿದ್ದಾರೆ.

ಉಪರಾಷ್ಟ್ರಪತಿ ಚುನಾವಣೆಯಲ್ಲಿ ಜಗನ್ ಅವರ ನಿಲುವನ್ನು ಗುರಿಯಾಗಿಸಿಕೊಂಡು ಶರ್ಮಿಳಾ ಪ್ರತಿಭಟಿಸಿದರು. ವೈಎಸ್ಆರ್ ತಮ್ಮ ಜೀವನದುದ್ದಕ್ಕೂ ಬಿಜೆಪಿ ಮತ್ತು ಆರ್‌ಎಸ್‌ಎಸ್ ಅನ್ನು ವಿರೋಧಿಸಿದ್ದಾರೆ. ಆದರೆ ಅವರ ಮಗ ಜಗನ್ ಆರ್‌ಎಸ್‌ಎಸ್ ಅಭ್ಯರ್ಥಿಯನ್ನು ಬೆಂಬಲಿಸುವುದು ನಾಚಿಕೆಗೇಡಿನ ಸಂಗತಿ. ಸಂವಿಧಾನವನ್ನು ಆಳವಾಗಿ ತಿಳಿದಿರುವ ಕಾನೂನು ತಜ್ಞ ಸುದರ್ಶನ್ ರೆಡ್ಡಿ ಅವರನ್ನು ಜಗನ್ ಏಕೆ ಬೆಂಬಲಿಸಲಿಲ್ಲ? ಎಂದು ಶರ್ಮಿಳಾ ಪ್ರಶ್ನಿಸಿದ್ದಾರೆ.

ವೈಎಸ್ಆರ್ ಸಾವಿನ ಹಿಂದೆ ರಿಲಯನ್ಸ್ ಪಿತೂರಿ ಇದೆ ಎಂದು ಜಗನ್ ಹೇಳಿದರು. ಆದರೆ ಅದೇ ರಿಲಯನ್ಸ್ ಅವರಿಗೆ ರಾಜ್ಯಸಭಾ ಸ್ಥಾನವನ್ನು ನೀಡಿತು. ಅವರು ಅದಾನಿಗಾಗಿ ಗಂಗಾವರಂ ಬಂದರನ್ನು ತ್ಯಾಗ ಮಾಡಿದರು. 5 ವರ್ಷಗಳ ಬಿಜೆಪಿ ಆಡಳಿತದಲ್ಲಿ ಜಗನ್ ಪ್ರತಿ ಮಸೂದೆಯನ್ನು ಬೆಂಬಲಿಸಿದರು. ಜಗನ್ ಈಗ ಯಾವ ಮುಖದಿಂದ ಈ ಬೆಂಬಲವನ್ನು ನೀಡುತ್ತಿದ್ದಾರೆಂದು ಉತ್ತರಿಸಬೇಕು ಎಂದು ಶರ್ಮಿಳಾ ಟೀಕಿಸಿದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !