ಹೊಸದಿಗಂತ ವರದಿ ಬೆಳಗಾವಿ:
ಶಕ್ತಿ ಯೋಜನೆಯ ಹಿನ್ನೆಲೆಯಲ್ಲಿ ಬಸ್ಗಳಲ್ಲಿ ಸೀಟ್ಗಾಗಿ ಪೈಪೋಟಿ ಹೆಚ್ಚಾಗಿರುವ ನಡುವೆಯೇ, ಸೀಟ್ ಕಾಯ್ದಿರಿಸುವ ವಿಚಾರಕ್ಕೆ ಇಬ್ಬರು ಪ್ರಯಾಣಿಕರ ನಡುವೆ ಗಲಾಟೆ ನಡೆದು ಮಾರಾಮಾರಿಗೆ ತಿರುಗಿದ ಘಟನೆ ಮಂಗಳವಾರ ಸಂಜೆ ಬೆಳಗಾವಿ ಕೇಂದ್ರ ಬಸ್ ನಿಲ್ದಾಣದಲ್ಲಿ ನಡೆದಿದೆ.
ಬೆಳಗಾವಿಯಿಂದ ಬೈಲಹೊಂಗಲಕ್ಕೆ ತೆರಳುತ್ತಿದ್ದ ಬಸ್ನಲ್ಲಿ ಘಟನೆ ನಡೆದಿದೆ. ಚಿಕ್ಕ ಮಕ್ಕಳಿಗಾಗಿ ವ್ಯಕ್ತಿಯೊಬ್ಬರು ಮುಂಚಿತವಾಗಿ ಬ್ಯಾಗ್ ಇಟ್ಟು ಸೀಟ್ ಕಾಯ್ದಿರಿಸಿದ್ದರು. ಆದರೆ ಮತ್ತೊಬ್ಬ ಪ್ರಯಾಣಿಕ ಬ್ಯಾಗ್ ತೆಗೆದು ಅದೇ ಸೀಟ್ನಲ್ಲಿ ಕುಳಿತಿದ್ದರಿಂದ ಇಬ್ಬರ ನಡುವೆ ವಾಗ್ವಾದ ಆರಂಭವಾಗಿದೆ.
ಇದನ್ನೂ ಓದಿ:
‘ಮೊದಲೇ ನಾನು ಬ್ಯಾಗ್ ಇಟ್ಟು ಸೀಟ್ ಹಿಡಿದಿದ್ದೆ. ನನ್ನ ಬ್ಯಾಗ್ ತೆಗೆದು ನೀನು ಯಾಕೆ ಕುಳಿತೆ?’ ಎಂದು ಪ್ರಶ್ನಿಸಿದ ವ್ಯಕ್ತಿ, ಮತ್ತೊಬ್ಬ ಪ್ರಯಾಣಿಕನೊಂದಿಗೆ ಮಾತಿನ ಚಕಮಕಿಗೆ ಇಳಿದಿದ್ದಾರೆ. ಕೆಲವೇ ಕ್ಷಣಗಳಲ್ಲಿ ವಾಗ್ವಾದ ತಾರಕಕ್ಕೇರಿದ್ದು, ಇಬ್ಬರೂ ಕೈ ಕೈ ಮಿಲಾಯಿಸುವ ಹಂತಕ್ಕೆ ತಲುಪಿದ್ದಾರೆ.
ಗಲಾಟೆ ಬಿಡಿಸಲು ಕೆಲವರು ಮುಂದಾದ ವೇಳೆ, ಪತಿಯೊಬ್ಬ ತನ್ನ ಪತ್ನಿಯ ಮೇಲೆಯೇ ಕೈ ಮಾಡಿದ ಘಟನೆ ಕೂಡ ನಡೆದಿದೆ. ಇದರಿಂದ ಕೆಲಕಾಲ ಬಸ್ ನಿಲ್ದಾಣದಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಯಿತು. ಬಳಿಕ ಬಸ್ನಲ್ಲಿದ್ದ ಇತರ ಪ್ರಯಾಣಿಕರು ಮಧ್ಯಪ್ರವೇಶಿಸಿ ಗಲಾಟೆಯನ್ನು ನಿಯಂತ್ರಿಸಿದರು.



