ಹೊಸದಿಗಂತ ವರದಿ, ಹುಬ್ಬಳ್ಳಿ:
ಮತ ಬ್ಯಾಂಕ್ ಸಲುವಾಗಿ ದೇಶ, ಸಮಾಜ ವಿರೋಧಿ ಕೃತ್ಯ ಮಾಡಿದ ಆರೋಪಿಗಳ ಮೇಲಿನ ಕೇಸ್ ಸರ್ಕಾರ ಹಿಂಪಡೆದಿರುವುದನ್ನು ಹೈಕೋರ್ಟ್ ರದ್ದುಪಡಿಸಿರುವುದು ಸರ್ಕಾರಕ್ಕೆ ಆದ ದೊಡ್ಡ ಮುಖಭಂಗ ಎಂದು ವಿಧಾನ ಸಭೆ ವಿರೋಧ ಪಕ್ಷದ ಉಪನಾಯಕ ಹಾಗೂ ಶಾಸಕ ಅರವಿಂದ ಬೆಲ್ಲದ್ ತಿಳಿಸಿದ್ದಾರೆ.
ಈ ಕುರಿತು ಪ್ರಕಟಣೆಗೆ ತಿಳಿಸಿದ ಅವರು, ಕಾಂಗ್ರೆಸ್ನ ಸಿದ್ದರಾಮಯ್ಯ ಸರ್ಕಾರ ಮುಸ್ಲಿಮರ್ ಓಟ್ ಬ್ಯಾಂಕ್ಗಾಗಿ ಕೇಸ್ ಹಿಂಪಡೆಯುವ ನಿರ್ಧಾರ ಕೈಗೊಂಡಿತ್ತು. ಈ ಪ್ರಕರಣ ಎನ್ಐಎನಲ್ಲಿದ್ದು, ಹಿಂಪಡೆಯಲು ಸಾಧ್ಯವಿಲ್ಲದಿದ್ದರೂ ಸಹ ಮುಸ್ಲಿಂ ಓಲೈಕೆಗಾಗಿ ಕ್ಯಾಬಿನೇಟ್ನಲ್ಲಿ ನಿರ್ಧಾರ ಕೈಗೊಂಡಿತ್ತು. ಈ ಹೈಕೋರ್ಟ್ ರದ್ದು ಪಡಿಸಿದ್ದು ಸಂತಸದ ಸಂಗತಿ. ಸಮಾಜ ವಿರೋಧಿ, ಸಮಾಜದಲ್ಲಿ ಗಲಭೆಯುಂಟು ಮಾಡುವ ಶಕ್ತಿಗಳಿಗೆ ಶಿಕ್ಷೆಯಾಗಬೇಕು. ಅಂತವರಿಗೆ ಶಿಕ್ಷಯಾದರೆ ಮುಂದೆ ಇಂತಹ ಕೃತ್ಯದಲ್ಲಿ ಯಾರು ಭಾಗವಹಿಸುವುದಿಲ್ಲ. ಕೋರ್ಟ್ ನಿರ್ಧಾರ ಸ್ವಾಗತಿಸುತ್ತೇನೆ ಎಂದು ಹೇಳಿದರು.