ಅಂತ್ಯಕ್ರಿಯೆ ವೇಳೆ ಉಸಿರಾಡಿದ ಮಗು ಧಾರವಾಡದಲ್ಲೊಂದು ವಿಚಿತ್ರ ಘಟನೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಅಂತ್ಯಕ್ರಿಯೆ ವೇಳೆ ಮಗು ಉಸಿರಾಡಿದ ವಿಚಿತ್ರ ಘಟನೆ ಧಾರವಾಡದಲ್ಲಿ ನಡೆದಿದೆ. ನವಲಗುಂದದ ಬಸಾಪೂರ ಗ್ರಾಮದ ಬಸವರಾಜ್ ಅವರ ಒಂದುವರೆ ವರ್ಷದ ಮಗುವಿಗೆ ಅನಾರೋಗ್ಯ ಕಾಡಿದ್ದು, ಹುಬ್ಬಳ್ಳಿಯ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಆಕ್ಸಿಜನ್ ಸಪೋರ್ಟ್ ತೆಗೆದರೆ ಮಗು ಉಸಿರಾಟ ನಿಲ್ಲಿಸುತ್ತದೆ ಎಂದು ವೈದ್ಯರು ಹೇಳಿದ್ದರು, ಇದಾದ ಕೆಲ ದಿನದಲ್ಲೇ ಮಗು ಮೃತಪಟ್ಟಿದೆ ಎಂದು ವೈದ್ಯರು ಹೇಳಿದ್ದು, ಅಂತ್ಯಕ್ರಿಯೆಗಾಗಿ ಮಗುವನ್ನು ತಮ್ಮ ಗ್ರಾಮಕ್ಕೆ ಕರೆತಂದಿದ್ದಾರೆ.

ಅಂತ್ಯಕ್ರಿಯೆ ವೇಳೆ ಮಗು ಬಾಯಿಗೆ ನೀರು ಹಾಕಿದ್ದು, ಮಗು ತಕ್ಷಣವೇ ರಿಯಾಕ್ಟ್ ಮಾಡಿದೆ, ಉಸಿರಾಟ ಆರಂಭಿಸಿದ್ದು, ಕೈ ಕಾಲುಗಳನ್ನು ಅಲುಗಾಡಿಸಿದೆ. ತಕ್ಷಣವೇ ಮತ್ತೆ ಪೋಷಕರು ಮಗುವನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಇದೀಗ ಮಗುವಿಗೆ ಚಿಕಿತ್ಸೆ ಮುಂದುವರಿದಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!