ಹೊಸದಿಗಂತ ವರದಿ ಸುಳ್ಯ :
ಸುಳ್ಯ ತಾಲೂಕಿನ ಸಂಪಾಜೆ ಗ್ರಾಮದಲ್ಲಿ ಚಲಿಸುತ್ತಿದ್ದ ಕಾರಿನ ಮೇಲೆ ಮರದ ಕೊಂಬೆ ಮುರಿದು ಬಿದ್ದ ಘಟನೆ ಇದೀಗ ವರದಿಯಾಗಿದೆ.
ಮರದ ಕೊಂಬೆಯು ವಿನಯ ಎಂಬುವವರ ಆಲ್ಟೋ ಎಂಟುನೂರರ ಮೇಲೆ ಮುರಿದ್ದು ಬಿದ್ದಿದೆ. ಮುಂಜಾನೆ ಇದೇ ಸ್ಥಳದಿಂದ ನೂರು ಮೀಟರ್ ದೂರದಲ್ಲಿ ವಿದ್ಯಾರ್ಥಿಗಳು ದೈನಂದಿನ ಆಟೋ ಹತ್ತುವ ಸ್ಥಳದಲ್ಲಿ ಮರದ ಕೊಂಬೆ ಬಿದ್ದಿದೆ. ಈ ವೇಳೆ ವಿದ್ಯಾರ್ಥಿಗಳು ಆಗಷ್ಟೇ ಆಟೋ ಒಳಕ್ಕೆ ಹತ್ತಿದ್ದರು ಎನ್ನಲಾಗಿದೆ. ಅದೃಷ್ಟವಶಾತ್ ಎರಡು ಪ್ರಕರಣಗಳಲ್ಲಿ ಯಾವುದೇ ರೀತಿಯ ಹಾನಿಗಳು ಸಂಭವಿಸದೇ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ.
ಅಲ್ಲದೇ ಈಗಾಗಲೇ ಅರಣ್ಯ ಇಲಾಖೆಯು ಸರಕಾರಿ ಜಮೀನಿನಲ್ಲಿನ ಮರಗಳ ತೆರವಿಗೆ ಗುರುತಿಸುವಿಕೆ ಹಾಗೂ ತೆರವು ಕಾರ್ಯ ನಡೆಸುತ್ತಿದ್ದು ಇದೀಗ ಸಂಭವಿಸಿದ ಮರವು ಖಾಸಗಿ ವ್ಯಕ್ತಿಗೆ ಸೇರಿದ ಸಾಗುವಾನಿ ಮರವಾಗಿದೆ ಅದಕ್ಕೆ ಕೆಲ ಅಡೆತಡೆಗಳು ಇದೆ ಎಂದು ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷ ಜಿ.ಕೆ ಹಮೀದ್ ಹಾಗೂ ಮುಖಂಡರಾದ ಟಿ ಎಂ ಶಹೀದ್ ತೆಕ್ಕಿಲ್ ತಿಳಿಸಿದ್ದಾರೆ.