ಈಜಲು ತೆರಳಿದ್ದ ಯುವಕ ನದಿಯಲ್ಲಿ ಮುಳುಗಿ ಮೃತ್ಯು

ಹೊಸದಿಗಂತ , ಮಡಿಕೇರಿ:

ಈಜಲು ತೆರಳಿದ್ದ ಯುವಕನೊಬ್ಬ ಕಾವೇರಿ ನದಿಯಲ್ಲಿ ಮುಳುಗಿ ಸಾವಿಗೀಡಾದ ಘಟನೆ ಶನಿವಾರ ನಡೆದಿದೆ.

ಮೃತನನ್ನು ಚೆಟ್ಟಳ್ಳಿ ಸಮೀಪದ ಕಂಡಕೆರೆ‌ ನಿವಾಸಿ ಶಂಭು ಹಾಗೂ ಮೀನಾ ದಂಪತಿಯ ಪುತ್ರ ಶರತ್ (24) ಎಂದು ಗುರುತಿಸಲಾಗಿದೆ.

ನಂಜರಾಯಪಟ್ಡಣ ಸಮೀಪದ ದಾಸವಾಳ ಎಂಬಲ್ಲಿ ಕಾವೇರಿ ನದಿಯಲ್ಲಿ ಈಜಲೆಂದು ನಾಲ್ವರು ನದಿಗೆ ಇಳಿದಿದ್ದು, ಈ ಪೈಕಿ ಶರತ್ ನೀರು ಪಾಲಾಗಿರುವುದಾಗಿ ಹೇಳಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!