ಪ್ರೀತಿಸಿ ಮದುವೆಯಾದ ಎರಡೇ ದಿನಕ್ಕೆ ಯುವತಿಗೆ ಕೈಕೊಟ್ಟ ಯುವಕ: ಮೂವರ ವಿರುದ್ಧ FIR ದಾಖಲು

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬೆಂಗಳೂರಿನ ಕೋರಮಂಗಲದ ಈಜಿಪುರದಲ್ಲಿ ಮದುವೆಯಾದ ಎರಡೇ ದಿನಕ್ಕೆ ಪತ್ನಿಯನ್ನು ಬಿಟ್ಟು ಯುವಕ ಪರಾರಿಯಾಗಿರುವ ಘಟನೆ ನಡೆದಿದೆ.

ಆಶಿಕ್ ಎಂಬಾತ ತನ್ನ ಪತ್ನಿ ತಾನಿಯಾಗೆ ಕಿರುಕುಳ ನೀಡಿ, ಹಲ್ಲೆ ನಡೆಸಿ ಪರಾರಿಯಾಗಿದ್ದಾನೆ. ಮೇ 7ರಂದು ಆಶಿಕ್ ಮತ್ತು ತಾನಿಯಾ ಪ್ರೀತಿಸಿ ಮದುವೆಯಾಗಿದ್ದು, ಈಜಿಪುರದ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು.

ಆಶಿಕ್ ಪೋಷಕರು ತಾನಿಯಾಗೆ ಎಚ್ಚರಿಕೆ ನೀಡಿದ್ದರು. ಹುಡುಗನಿಗಿಂತ ನೀನು ದೊಡ್ಡವಳು. ಚೆನ್ನಾಗಿ ಕಾಣಲ್ಲ, ಆಶಿಕ್ ನನ್ನು ಬಿಟ್ಟುಬಿಡಿ ಎಂದು ಹೇಳಿದ್ದರು. ಅಲ್ಲದೇ ಎರಡು ದಿನ ಆಶಿಕ್ ಕೂಡ ಕಿರುಕುಳ ನೀಡಿ ಹಲ್ಲೆ ನಡೆಸಿ ಇದೀಗ ಪತ್ನಿಯನ್ನು ಬಿಟ್ಟು ಪರಾರಿಯಾಗಿದ್ದಾನೆ.

ಇದರಿಂದ ಬೇಸರಗೊಂಡ ತಾನಿಯಾ ವಿವೇಕನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಆಶಿಕ್ ಪೋಷಕರ ವಿರುದ್ಧ ಎಫ್ ಐಆರ್ ದಾಖಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!